ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಬೇಕು, ಆರೋಗ್ಯವಲಯದಲ್ಲಿ ಇನ್ನಷ್ಟು ಸೌಲಭ್ಯ ಸುಧಾರಿಸಬೇಕು, ಕೊಲ್ಲಂ ಜಿಲ್ಲೆಯ ತೇವಳಕರ ನಿವಾಸಿ ನಜೀಂ ಕಳಂಗರ ಎಂಬವರು ಕಾಸರಗೋಡಿನಿಂದ ಏಕಾಂಗಿಯಾಗಿ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ್ದಾರೆ. ನಿತ್ಯೋಪಯೋಗಿ ಸಾಮಗ್ರಿ ಬೆಲೆ ಕಡಿತಗೊಳಿಸಬೇಕು, ಆರೋಗ್ಯ ವಲಯದ ಉನ್ನತೀಕರಣ, ಬಡ ರೋಗಿಗಳಿಗೆ ಎಲ್ಲೆಡೆಗಳಲ್ಲಿ ಉಚಿತ ಔಷಧ ಸಿಗಬೇಕು.
ಈ ಎಲ್ಲಾ ಬೇಡಿಕೆ ಪಟ್ಟಿ ಮುಂದಿಟ್ಟುಕೊಂಡು ಇಲ್ಲೊಬ್ಬ ಯುವಕ ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿ ವಠಾರದಿಮದ ಕೇರಳದಲ್ಲಿ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ್ದಾರೆ. ಕೊಲ್ಲಂ ಜಿಲ್ಲೆಯ ತೇವಳಕರ ನಿವಾಸಿಯಾಗಿರುವ ಈ ನಜೀಂ ಕಳಂಗರ ಎಂಬವರು ಮುಂದಿನ 60 ದಿನಗಳ ಕಾಲ ಈ ಪಾದಯಾತ್ರೆ ಮುಂದುವರಿಸಲಿದ್ದಾರೆ.