ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಜಲು ಸ್ನೇಹಿತೆಯರೊಂದಿಗೆ ಕೆಂಪಾಪುರ ಕೆರೆಗೆ ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತುಮಕೂರಿನ ಮಧುಗಿರಿ ತಾಲೂಕಿನ ಕೋಡಿಗೇನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಂದು ಹಾಗೂ ಪ್ರಿಯಾಂಕ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು.
ಸೃಷ್ಟಿ ಹಬ್ಬದ ಕಾರಣ ಶಾಲೆಗೆ ರಜೆ ನೀಡಿದ್ದು, ಐವರು ಸ್ನೇಹಿತರು ನದಿಯಲ್ಲಿ ಈಜಲು ತೆರಳಿದ್ದಾರೆ. ಈ ಹಬ್ಬದಂದು ಎಲ್ಲರೂ ಹೊಲದಲ್ಲೇ ಅಡುಗೆ ಮಾಡಿ ತಿನ್ನಿವುದು ಪ್ರತೀತಿ. ಪೋಷಕರಿಗೂ ಮುನ್ನವೇ ಬಾಲಕಿಯರು ಹೊಲಕ್ಕೆ ತೆರಳಿದ್ದರು. ಹೊಲದ ಬದಲು ಬಾಲಕಿಯರು ಈಜಲು ತೆರಳಿದ್ದು, ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.