ಸರ್ಕಾರದ ವಿರುದ್ಧ ಮಾತನಾಡುವವರನ್ನು ಬಂಧಿಸುತ್ತಾರೆ: ಸತೀಶ ಜಾರಕಿಹೊಳಿ ಆರೋಪ

ಹೊಸದಿಗಂತ ವರದಿ,ವಿಜಯಪುರ: :

ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವವರನ್ನು ಬಂಧಿಸುತ್ತಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಶೇ. 40 ಕಮಿಷನ್ ಬಗ್ಗೆ ಆರೋಪ ಮಾಡಿದ್ದರು. ಅದಕ್ಕಾಗಿ ಬಂಧಿಸಿದ್ದು, ಇದು ಬಿಜೆಪಿ ಸರ್ಕಾರದಲ್ಲಿ ಸಾಮಾನ್ಯ ಎಂದು ಕಿಡಿಕಾರಿದರು.

ಅಲ್ಲದೇ, ಜನಾರ್ಧನ ರೆಡ್ಡಿ ನೂತನ ಪಕ್ಷದಿಂದ ಕಾಂಗ್ರೆಸ್, ಬಿಜೆಪಿಗೆ ಪ್ಲಸ್ ಆಗಬಹುದು. ಮೈನಸ್ ಆಗಬಹುದು. ರೆಡ್ಡಿಯವರು ಅದನ್ನು ಯಾವ ತರಹ ಸಂಘಟನೆ‌ ಮಾಡುತ್ತಾರೆ ನೋಡಬೇಕು. ಅದರ ಮೇಲೆ ಪ್ಲಸ್. ಮೈನಸ್ ಆಗಬಹುದು. ತಕ್ಷಣವೇ ಏನು ಹೇಳೋಕೆ ಆಗಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!