‘ಬೇರೆ ಭಾಷೆಯಲ್ಲಿ ನಟಿಸಿದ್ರೂ ಮನಸ್ಸು ಸದಾ ಕನ್ನಡ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ನಟಿಯರು ಒಂದು ಹಿಟ್ ಸಿನಿಮಾ ನಂತರ ಬಾಲಿವುಡ್‌ಗೆ ಹಾರಿ ಹೋಗ್ತಾರೆ, ಅದೇ ರೀತಿ ಕಾಂತಾರ ನಟಿ ಸಪ್ತಮಿ ಗೌಡ ಕೂಡ ಬಾಲಿವುಡ್‌ಗೆ ಹಾರುತ್ತಿದ್ದಾರೆ.

ಒಮ್ಮೆ ಬಾಲಿವುಡ್‌ಗೆ ಹೋದೋರು ಮತ್ತೆ ಕನ್ನಡಕ್ಕೆ ಬರೋದಿಲ್ಲ ಅನ್ನೋ ಮಾತನ್ನು ಸಪ್ತಮಿ ಗೌಡ ನಿರಾಕರಿಸಿದ್ದಾರೆ. ನಾನು ಬೇರೆ ಭಾಷೆ ಸಿನಿಮಾ ಮಾಡ್ತೀನಿ ಆದರೆ ನನ್ನ ಮೊದಲ ಪ್ರಾಮುಖ್ಯತೆ ಕನ್ನಡಕ್ಕೆ, ನನ್ನ ಮನಸ್ಸು ಕನ್ನಡದ್ದು ಎಂದು ಹೇಳಿದ್ದಾರೆ.

ಬಹುಭಾಷೆಗಳಿಂದ ಸಪ್ತಮಿಗೆ ಸಾಕಷ್ಟು ಆಫರ್ ಬರುತ್ತಿದ್ದು, ಆರಿಸಿದ ಸಿನಿಮಾಗಳಿಗೆ ಸಪ್ತಮಿ ಸಹಿ ಹಾಕುತ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ಕಾಂತಾರ ನೋಡಿ ರಿಷಬ್‌ಗೆ ಕರೆ ಮಾಡಿದ್ದರು. ನಂತರ ಅವರಿಂದ ನನ್ನ ನಂಬರ್ ಪಡೆದರು. ಒಂದು ಪಾತ್ರಕ್ಕೆ ನಾನು ಸೂಕ್ತ ಎಂದು ಅವರಿಗೆ ಅನಿಸಿದೆ. ಸ್ಕ್ರಿಪ್ಟ್ ಕಳಿಸಿದರು. ಒಕೆ ಮಾಡಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!