ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಪತ್ನಿ ಅಮೃತ ಫಡಣವೀಸ್ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಅನಿಲ್ ಜೈಸಿಂಘಾನಿಯ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಅನಿಲ್ ಸಿಂಘಾನಿಯಾ ಅರ್ಜಿ ಸಲ್ಲಿಸಿದ್ದವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ನ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎ. ಎಸ್. ಗಡ್ಕರಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ತಮಗೆ ಸಂಬಂಧಿಸಿದ ಕೆಲವು ವಿಡಿಯೊ ಹಾಗೂ ಆಡಿಯೊ ತುಣುಕುಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಅನಿಲ್ ಜೈಸಿಂಘಾನಿಯ ಹಾಗೂ ಆತನ ಮಗಳು ಅನಿಕ್ಷಾ ಜೈಸಿಂಘಾನಿಯ ಬೆದರಿಕೆ ಒಡ್ಡಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅಮೃತ ಫಡಣವೀಸ್ ದೂರು ನೀಡಿದ್ದರು. ದೂರಿನನ್ವಯ ದಕ್ಷಿಣ ಮುಂಬೈನ ಮಲಬಾರ್ ಹಿಲ್ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದರು.
ಮಾರ್ಚ್ 17ರಂದು ಆರೋಪಿ ಅನಿಕ್ಷಾ ಜೈಸಿಂಘಾನಿಯ ಅವರನ್ನು ಬಂಧಿಸಿದ್ದ ಪೊಲೀಸರು, ಮಾರ್ಚ್ 19ರಂದು ಆಕೆಯ ತಂದೆಯನ್ನು ಗುಜರಾತ್ನಲ್ಲಿ ಬಂಧಿಸಿದ್ದರು. ಮಾರ್ಚ್ 27ರಂದು ಜಾಮೀನಿನ ಮೇಲೆ ಅನಿಕ್ಷಾ ಹೊರ ಬಂದಿದ್ದಾರೆ.