ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಬೆದರಿಕೆ ಕರೆಗಳು ಬಂದಿದ್ದು, ಫೋನ್ ಮಾಡಿದ್ದು ಹಿಂಡಲಗಾ ಜೈಲಿನ ಕೈದಿ ಎಂದು ತಿಳಿದುಬಂದಿದೆ. ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿ ಜೈಯೇಶ್ ಕಾಂತ ಬೆದರಿಕೆ ಕರೆ ಮಾಡಿದ್ದಾರೆ. ಇನ್ನೊಬ್ಬ ಕೈದಿ ಬಳಿ ಫೋನ್ ಕೇಳಿ, ಪತ್ನಿಗೆ ಕರೆ ಮಾಡುತ್ತೇನೆ ಎಂದು ಜಯೇಶ್ ಹೇಳಿದ್ದು, ಬೆದರಿಕೆ ಕರೆ ಮಾಡಿದ್ದಾನೆ.
ಕಚೇರಿ ಸಿಬ್ಬಂದಿ ನಾಗ್ಪುರ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ತನಿಖೆ ವೇಳೆ ಕರೆ ಹಿಂಡಲಗಾ ಜೈಲಿನಿಂದ ಬಂದಿದೆ ಎಂದು ಪತ್ತೆಹಚ್ಚಿದ್ದಾರೆ. ನಾಗ್ಪುರ ಪೊಲೀಸರು ಬೆಳಗಾವಿಗೆ ಬಂದಿದ್ದು, ಜೈಲಿನಲ್ಲಿ ಮಾಹಿತಿ ಕಲೆ ಹಾಕಿದ್ದಾರೆ.
ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜಯೇಶ್ ಜೈಲು ಸೇರಿದ್ದು, ಹಿಂದೊಮ್ಮೆ ಆಗಿನ ಉತ್ತರ ವಲಯ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಅವರಿಗೆ ತಾನು ನಕ್ಸಲೇಟ್ ಎಂದು ಹೇಳಿಕೊಂಡು ಕರೆ ಮಾಡಿದ್ದ.