ಹೊಸದಿಗಂತ ವರದಿ ವಿಜಯಪುರ:
ಅಕ್ರಮ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಹೊಂದಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಹೊರವಲಯ ಸೊಲ್ಲಾಪುರ ಹೆದ್ದಾರಿ ಹತ್ತಿರದ ಹುಂಡೇಕರ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಜಿತೇಶ ನಾಹರ (27), ಗೋವಿಂದ ರಾಠೋಡ (35), ಸತೀಶ್ ನಾಯಕ (29) ಬಂಧಿತ ಆರೋಪಿಗಳು.
ಈ ಮೂರು ಆರೋಪಿಗಳ ಪೈಕಿ ಸತೀಶ ನಾಯಕ ಎಂಬಾತ, ಜಿತೇಶ, ಗೋವಿಂದ ಇಬ್ಬರಿಗೂ ಕಂಟ್ರಿ ಪಿಸ್ತೂಲ್ ಹಾಗೂ 2 ಜೀವಂತ ಗುಂಡು ಇರಿಸಿಕೊಳ್ಳಲು ಕೊಟ್ಟಿದ್ದನೆಂದು ತಿಳಿದು ಬಂದಿದೆ. ಜಿತೇಶ ಬಳಿ ಸ್ಟೀಲ್ ನಮೂನೆಯ ಕಂಟ್ರಿ ಪಿಸ್ತೂಲ್ ಹಾಗೂ ಗೋವಿಂದನ ಬಳಿ 2 ಜೀವಂತ ಗುಂಡು ಇದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರ್ಶನಗರ ಪಿಎಸ್ಐ ಯತೀಶ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.