ಹೊಸದಿಗಂತ ವರದಿ ಧಾರವಾಡ:
ಜಿಲ್ಲೆಯ ವಿವಿಧಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಧಾರವಾಡ ಸಂಜೀವಿನಿ ಪಾರ್ಕ್ ಬಳಿ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಹಾಂತೇಶ ಮೃತಪಟ್ಟಿದ್ದಾನೆ.
ಇನ್ನೂ ಅಮ್ಮಿನಬಾವಿ ಬಳಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದು, ಓರ್ವ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾನೆ.
ಬೇಲೂರಿನಲ್ಲಿ ಆಕಸ್ಮಿಕ ವಿದ್ಯುತ್ ತಂತಿ ಗಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಹೆಸರು ವೀರಣ್ಣ ಎಂದು ತಿಳಿದು ಬಂದಿದೆ.
ಇನ್ಮೂ ಅಳ್ನಾವರ ಹತ್ತಿರ ನಡೆದ ಅಪಘಾತದಲ್ಲಿ ಮೂರು ಜನ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಿದೆ.