ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ಸೆಪ್ಟಿಕ್ ಟ್ಯಾಂಕ್ಗೆ ಜೋಡಿಸಲಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುಕ್ಕಲಿಯೂರಿನ ಗಾಂಧಿನಗರದ ಮನೆಯ ಆವರಣದಲ್ಲಿ ಮನೆಯ ಟ್ಯಾಂಕ್ನಲ್ಲಿ ಮೋಹನ್ ರಾಜ್, ರಾಜೇಶ್ ಹಾಗೂ ಶಿವಕುಮಾರ್ ಇಳಿದು ಮೃತಪಟ್ಟಿದ್ದಾರೆ.
ಟ್ಯಾಂಕರ್ ಒಳಗೆ ಇಳಿದ ಕಾರ್ಮಿಕ ಮೋಹನ್ ಹಾಗೂ ರಾಜೇಶ್ ಇದ್ದಕ್ಕಿದ್ದಂತೆಯೇ ಕೂಗಲು ಆರಂಭಿಸಿದ್ದಾರೆ. ಇದನ್ನು ಕೇಳಿದ ಶಿವಕುಮಾರ್ ತಕ್ಷಣ ಓಡಿ ಬಂದಿದ್ದಾರೆ. ಇಬ್ಬರೂ ಕಾರ್ಮಿಕರು ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಕಂಡು ಶಿವಕುಮಾರ್ ತಕ್ಷಣ ಟ್ಯಾಂಕರ್ ಒಳಗೆ ಹಾರಿದ್ದಾರೆ. ಅವರು ಉಸಿರಾಡಲಾಗದೇ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಮೂವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.