ಹೊಸದಿಗಂತ ವರದಿ, ಬಳ್ಳಾರಿ:
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಟಿಕೇಟ್ ವಿಚಾರದಲ್ಲಿ ಮನೆ ಹಾಳು ಮಾಡುವ ಶಕುನಿಗಳು ತಲೆ ಕೆಡಿಸ್ತಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೇಟ್ ಎಂದು ನಾನು ಕಳೆದ ಒಂದೂವರೆ ವರ್ಷದಿಂದ ಹೇಳಿಕೆ ನೀಡುತ್ತಾ ಬಂದಿರುವೆ, ಅದರಂತೆ ನಡೆವೆ ಇದರಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮೀ ಅವರು ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ರೇವಣ್ಣನ ಹಿಂದೆ ಶಕುನಿಗಳಿದ್ದಾರೆ, ಅದು ಆತನಿಗೆ ಅರ್ಥವಾಗುತ್ತಿಲ್ಲ, ಹಿತಶತ್ರುಗಳು ಅವರ ಬೆನ್ನು ಹತ್ತಿದ್ದಾರೆ, ಹಾಸನ ಜಿಲ್ಲೆಯ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರುವ ಮಾತೇ ಇಲ್ಲ, ರೇವಣ್ಣ ಅವರು ಈ ವಿಚಾರಕ್ಕೆ ಸಂಬಂದಿಸಿದಂತೆ ಚೆರ್ಚೆಗೆ ಬರುತ್ತಿಲ್ಲ, ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೇಟ್ ಇದರಲ್ಲಿ ಬೇರೆ ಆಲೋಚನೆಯೇ ಇಲ್ಲ. ಈ ವಿಚಾರದಲ್ಲಿ ನನ್ನನ್ನು ಕಟ್ಟಿ ಹಾಕಬೇಕು ಎಂದು ಕೆಲವರು ಕಾಯುತ್ತಿದ್ದಾರೆ, ಅದು ಅವರ ಕನಸು, ಅವರು ಯಾರು ಎಂಬುದು ನನಗೆ ಗೊತ್ತಿದೆ, ರೇವಣ್ಣ ಅವರನ್ನು ಮನವೊಲಿಸಲು ದೇವೇಗೌಡ್ರು ಮುಂದಾಗುತ್ತಿಲ್ವೆ ಎನ್ನುವ ಪ್ರಶ್ನೆಗೆ, ಅವರಿಗೆ ರೇವಣ್ಣ ಅವರನ್ನು ಮನವೊಲಿಸುವ ಶಕ್ತಿಯಿಲ್ಲ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಎಸ್ಟಿ ಮೊರ್ಚಾ ರಾಜ್ಯಾಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ದೊರೆ, ಮೀನಳ್ಳಿ ತಾಯಣ್ಣ, ಬಳ್ಳಾರಿ ನಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಮುನ್ನಾಭಾಯಿ ಇತರರಿದ್ದರು.