ಹೊಸದಿಗಂತ ವರದಿ ರಾಯಚೂರು :
ಇತ್ತೀಚೆಗೆ ಟಿಪ್ಪರ್ ಲಾರಿ ಹರಿದು ವ್ಯಕ್ತಿ ಮೃತಪಟ್ಟ ಘಟನೆ ಖಂಡಿಸಿ. ಟಿಪ್ಪರ್ಲಾರಿ ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಗರದ ಗದ್ವಾಲ ರಸ್ತೆಯಲ್ಲಿ ಸ್ಥಳೀಯರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ನಗರದ ವಾರ್ಡ್ ನಂ.22,23ರ ನಿವಾಸಿಗಳು ಪ್ರತಿಭಟನೆ ನಡೆಸಿ ಅಪೂರ್ಣವಾಗಿರುವ ಗದ್ವಾಲ್ ರಸ್ತೆಯನ್ನು ಪೂರ್ಣಗೊಳಿಸಬೇಕು. ಅಕ್ರಮವಾಗಿ ಸಾಗಿಸಲಾಗುತ್ತಿರುವ ಮೊರಂ ಟಿಪ್ಪರ್ ಲಾರಿಗಳ ಸ್ಥಗಿತಗೊಳಿಸುವಂತೆ ಆಗ್ರಹಿದರಲ್ಲದರಲ್ಲದೆ ಇತ್ತೀಚೆಗೆ ಟಿಪ್ಪರ್ ಲಾರಿ ಹಾಯ್ದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.