ಗಂಡನ ಅನುಮಾನಕ್ಕೆ ಬೇಸತ್ತು ಹೆಂಡತಿ,ಮಕ್ಕಳು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾರವಾಡದ ಬ್ಯಾಹಟ್ಟಿ ಗ್ರಾಮದಲ್ಲಿ ಗಂಡನ ಅನುಮಾನಕ್ಕೆ ಬೇಸತ್ತು ಹೆಂಡತಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ತುಂಬಿ ಹಾಗೂ ಮಗಳು ಸೈನಾಜ್ ಶವ ಕೆರೆಯಲ್ಲಿ ಪತ್ತೆಯಾಗಿದೆ. ಗಂಡ ಅನುಮಾನ ಪಡುತ್ತಿದ್ದ, ಅವನೇ ಕೊಂದು ಕೆರೆಗೆ ಹಾಕಿದ್ದಾನೆ ಎಂದು ಮಕ್ತುಂಬಿ ಸಂಬಂಧಿಕರು ಆರೋಪಿಸಿದ್ದಾರೆ.

ಮಾಬುಸಾಬ್ ಹಾಗೂ ಮಕ್ತುಂಬಿ 20 ವರ್ಷಗಳಿಂದ ಒಟ್ಟಿಗೇ ಇದ್ದಾರೆ. ಮೊದಲಿನಿಂದಲೂ ಅನುಮಾನ ಸ್ವಭಾವದವನಾದ ಮಾಬುಸಾಬ್ ಮಗಳ ಮೇಲೂ ಅನುಮಾನ ಪಡುತ್ತಿದ್ದ. ದಿನವೂ ಜಗಳ ಮಾಮೂಲಾಗಿತ್ತು. ಇದೇ ವಿಕೋಪಕ್ಕೆ ತಿರುಗಿ ಮೂರು ದಿನದ ಹಿಂದೆ ದೊಡ್ಡ ಗಲಾಟೆಯಾಗಿತ್ತು. ಒಂದೇ ಹಗ್ಗದಲ್ಲಿ ಕುತ್ತಿಗೆ ಕಟ್ಟಿಕೊಂಡು ಗ್ರಾಮದ ಹೊರವಲಯದ ಕೆರೆಯಲ್ಲಿ ತಾಯಿ ಮಗಳು ಬಿದ್ದಿದ್ದಾರೆ.

ಹೆಂಡತಿ, ಮಗಳು ಮನೆಯಲ್ಲಿ ಇಲ್ಲದ್ದನ್ನು ಕಂಡು ಮಾಬುಸಾಬ್ ಪೊಲೀಸರ ಬಳಿ ಹೋಗಿದ್ದಾನೆ. ನಂತರ ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!