ಇಂದು ನಾನು ಎಂದಿಗೂ ಮರೆಯದ ಶುಭದಿನ :ಬಿಎಸ್‌ವೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಮಾಜಿ ಸಿ.ಎಂ. ಯಡಿಯೂರಪ್ಪ ಅವರ ಜನ್ಮದಿನ, 80 ರಲ್ಲೂ ನಿಲ್ಲದ ಉತ್ಸಾಹವಿರುವ ನಾಯಕನ ಕನಸಿನ ಕೂಸು ಶಿವಮೊಗ್ಗ ಏರ್‌ಪೋರ್ಟ್ ಇಂದು ಲೋಕಾರ್ಪಣೆಯಾಗುತ್ತಿದೆ.

ಇಂದು ನನಗೆ ಮರೆಯಲಾಗದ ಶುಭದಿನ, ಬಹಳ ವರ್ಷದ ಕನಸು ಇಂದು ನನಸಾಗುತ್ತಿದೆ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಖುದ್ದು ಪ್ರಧಾನಿ ಮೋದಿ ಅವರೇ ಉದ್ಘಾಟಿಸುತ್ತಿರುವುದು ಖುಷಿಯ ವಿಷಯ. ವಿಮಾನ ನಿಲ್ದಾಣವನ್ನು ಸಂಚಾರ ಮತ್ತು ಇತರೆ ಜೀವನೋಪಾಯಕ್ಕೆ ಉಪಯೋಗ ಮಾಡಿಕೊಂಡರೆ ಇನ್ನೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ಸಿಎಂ ಬೊಮ್ಮಾಯಿ ಕೂಡ ಮಾತನಾಡಿದ್ದು, ಬಿಎಸ್‌ವೈ ಅವರ ಪರಿಶ್ರಮದಿಂದ ಶಿವಮೊಗ್ಗಕ್ಕೆ ಏರ್‌ಪೋರ್ಟ್ ದೊರೆತಿದೆ. ಅದರಲ್ಲೂ ಅವರ ಜನ್ಮದಿನದಂದೇ ಏರ್‌ಪೋರ್ಟ್ ಉದ್ಘಾಟನೆ ಆಗುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!