ದಿನಭವಿಷ್ಯ: ಆಧ್ಯಾತ್ಮಿಕ ಪ್ರಯಾಣಕ್ಕೆ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಮೇಷ
ಸಣ್ಣಪುಟ್ಟ ವಾಗ್ವಾದ, ಸಂಘರ್ಷ ನಡೆದೀತು. ಹೊಂದಾಣಿಕೆಯಿಂದ ನಡಕೊಳ್ಳಿ. ವ್ಯವಹಾರದಲ್ಲಿ ಮುಕ್ತ ಮನಸ್ಸು ಇರಲಿ. ಮುಚ್ಚುಮರೆ ಬೇಡ.
ವೃಷಭ
ಇತರರ ಕುರಿತಾದ ಅಸೂಯೆಯಿಂದ ಹೊರಬನ್ನಿ. ಅದು ನಿಮ್ಮ ಮನಶ್ಯಾಂತಿ ಹಾಳು ಮಾಡುತ್ತಿದೆ. ನಿಮ್ಮ ಸಾಧನೆಗೆ ಗಮನ ಕೊಡಿ.
ಮಿಥುನ
ಕೆಲವು ವಿಷಯ
ಸಣ್ಣದೆಂದು ಕಡೆಗಣಿಸಿದರೆ ಕೆಡುವಿರಿ. ಅದು ದೊಡ್ಡ ಪರಿಣಾಮ ಉಂಟು ಮಾಡೀತು. ಕೌಟುಂಬಿಕ ಭಿನ್ನಮತ ಪರಿಹರಿಸಿ.
ಕಟಕ
ಕೆಲವು ವಿಷಯ ಗಳಲ್ಲಿ ಸಮಸ್ಯೆ ಕಾಡುವುದು. ಅದನ್ನು ಕೂಡಲೇ ಪರಿಹರಿಸಿ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು.
ಸಿಂಹ
ಬಂಧುಗಳ ಜತೆ ಜಗಳವಾದೀತು. ಅವರ ವರ್ತನೆ ನಿಮಗೆ ರೋಷ ಬರಿಸಬಹುದು. ಆರ್ಥಿಕ ಒತ್ತಡ ಹೆಚ್ಚು. ಖರ್ಚು ನಿಯಂತ್ರಿಸಿರಿ.
ಕನ್ಯಾ
ಬಿಡುವಿಲ್ಲದ ಕಾರ್ಯದ ಮಧ್ಯೆಯೂ ಕುಟುಂಬದ ಕಡೆ ಗಮನ ಕೊಡಲು ಮರೆಯದಿರಿ. ಸಣ್ಣ ಕೊರಗೊಂದು ಮನಸ್ಸು ಕೆಡಿಸಲಿದೆ.
ತುಲಾ
ಇತರರ ಸಮಸ್ಯೆ ಪರಿಹರಿಸುವ ಪ್ರಯತ್ನದಲ್ಲಿ ನೀವೇ ಸಮಸ್ಯೆಗೆ ಸಿಲುಕದಿರಿ. ಮೆಚ್ಚಿನ ಹವ್ಯಾಸದಿಂದ ಮಾನಸಿಕ ನೆಮ್ಮದಿ ಪಡೆಯುವಿರಿ.
ವೃಶ್ಚಿಕ
ಭಾವುಕ ವಿಷಯ ಗಳಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಮಾನಸಿಕ ನೋವು ತಿನ್ನುವುದು ತಪ್ಪಬಹುದು. ಹಣದ ಒತ್ತಡ ಸಂಭವ.
ಧನು
ಆತ್ಮೀಯ ಸಂಬಂಧ ಕಾಯ್ದುಕೊಳ್ಳಲು ಕಷ್ಟ ಪಡುವಿರಿ. ಅವರ ಭಾವನೆಗೂ ಬೆಲೆ ಕೊಡಿ. ಕೆಲವರ ಬಗೆಗಿನ  ಪೂರ್ವಗ್ರಹ ತ್ಯಜಿಸಿರಿ.
ಮಕರ
ಬಾಕಿಯುಳಿದ ವ್ಯವಹಾರ ಪೂರ್ಣ ಗೊಳಿಸಿ. ಅದನ್ನು ಹಾಗೇ ಬಿಡಬೇಡಿ. ಸಮಸ್ಯೆ ಪರಿಹರಿಸಲು ಆತ್ಮೀಯರ ನೆರವು. ಕೌಟುಂಬಿಕ ಶಾಂತಿ
ಕುಂಭ
ಉತ್ಸಾಹಭಂಗ ವಾಗುವ ಬೆಳವಣಿಗೆ ಸಂಭವ. ಜಾಣತನದಿಂದ ನಿಭಾಯಿಸಿ. ಸಾಂಸಾರಿಕ ತಾಪತ್ರಯ ಬೇಸರ ತರುವುದು.
ಮೀನ
ಸಣ್ಣ ವಿಷಯಗಳು ಮನಸ್ಸಿನ ಶಾಂತಿ ಕದಡು ವುದು. ಪರಿಹಾರ ಕಾರ್ಯ ವಿಳಂಬ. ಕಾರ್ಯ ಸಾಧನೆಗೆ ಕೌಟುಂಬಿಕ ಸಹಕಾರ ಅಗತ್ಯ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!