ದಿನಭವಿಷ್ಯ| ಇಂದು ಈ ರಾಶಿಯವರ ಒಂದು ತಪ್ಪು ಹೆಜ್ಜೆ, ದೊಡ್ಡ ಪ್ರಮಾದ ಸೃಷ್ಟಿಸೀತು….

ದಿನಭವಿಷ್ಯ

ಮೇಷ
ಆಪ್ತೇಷ್ಟರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ಕೆಲಸದ ಜಂಜಾಟವಿಲ್ಲ. ಇಂದಿನ ದಿನ ನಿಮಗೆ ಹಳೆ ನೆನಪು ಕೆದಕಲು ಸಹಕಾರಿ.

ವೃಷಭ
ಮಾನಸಿಕ ಉದ್ವಿಗ್ನತೆ. ಹಾಗಾಗಿ ಬಿಡುವಿನ ದಿನವನ್ನು ಸಂತೋಷದಿಂದ ಕಳೆಯಲು ಆಗುವುದಿಲ್ಲ. ಆರೋಗ್ಯದ ಚಿಂತೆ.

ಮಿಥುನ
ಸಂಘರ್ಷದ ಸಂಕೇತವು ತೋರಿ ಬರುತ್ತಲಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ.  ಇಲ್ಲವಾದರೆ ನೀವು ಮಾನಸಿಕ ನೆಮ್ಮದಿ ಕಳಕೊಳ್ಳುವಿರಿ.

ಕಟಕ
ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಅದರಿಂದ ನಿಮಗೇ ತೊಂದರೆ ಉಂಟಾದೀತು. ಕುಟುಂಬ ಸದಸ್ಯರ ಜತೆ ದಿನ ಕಳೆಯಿರಿ.

ಸಿಂಹ
ಇತರರು ನಿಮ್ಮ ಕಾರ್ಯವನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ವಂಚನೆಯ ದಾರಿ ಹಿಡಿಯಬೇಡಿ. ಕೆಲಸವನ್ನು ಗಂಭೀರ ವಾಗಿ ನಿರ್ವಹಿಸಿ.

ಕನ್ಯಾ
ನಿಮ್ಮ ಸಂಬಂಧದಲ್ಲಿ ಮಹತ್ತರ ತಿರುವೊಂದು ಉಂಟಾದೀತು. ತಪ್ಪು ನಡೆ ಇಟ್ಟರೆ ಅದು ಪ್ರಮಾದ ಸೃಷ್ಟಿಸೀತು. ವಿವೇಕದಿಂದ ವರ್ತಿಸಬೇಕು.

ತುಲಾ

ಶುಭ ಬೆಳವಣಿಗೆ ಸಂಭವಿಸುವುದು. ಉದ್ದಿಮೆಯಲ್ಲಿ ಅವಸರದ ನಿರ್ಧಾರ ತಾಳಬೇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರದ ಹಂತ ತಲುಪುವುದು.

ವೃಶ್ಚಿಕ
ದೇವರ ಅನುಗ್ರಹ ನಿಮಗಿದೆ. ಹಾಗಾಗಿ ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ. ಕೌಟುಂಬಿ ಅಶಾಂತಿ ನಿವಾರಣೆ.

ಧನು
ಕೌಟುಂಬಿಕ ವಿಚಾರವೊಂದು ಮನಸ್ಸು ಕೆಡಿಸುವುದು. ಅದನ್ನು ಸುಲಭದಲ್ಲಿ ಪರಿಹರಿಸಬಹುದು. ಆದರೆ ನೀವು ಅದನ್ನು ಕಂಡುಕೊಳ್ಳುತ್ತಿಲ್ಲ.

ಮಕರ
ಅನವಶ್ಯವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ಅದಕ್ಕೆ ಕಾರಣ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ನಿಮ್ಮ ಸ್ವಭಾವ.

ಕುಂಭ
ಇಂದು ನಿಮ್ಮ ದಿನ. ಉತ್ಸಾಹದಿಂದ ಕಾರ್ಯ ಎಸಗುವಿರಿ. ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದು. ಕೌಟುಂಬಿಕ ಸಹಕಾರ, ಸಮಾಧಾನ.

ಮೀನ
ಹಳೆಯ ನೆನಪಿನಲ್ಲೆ ಬದುಕು ಸಾಗಿಸಬೇಡಿ. ಕೆಲವು ವಿಷಯ ಮರೆತು ಮುಂದೆ ಹೋಗಬೇಕು. ಅತಿಯಾದ ಭಾವುಕತೆ ಒಳಿತಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!