ದಿನಭವಿಷ್ಯ: ಎಷ್ಟೋ ಸಮಯದಿಂದ ಬಾಕಿ ಉಳಿದಿರೋ ಕೆಲಸ ಮುಗಿಸಲು ಇಂದು ಸುದಿನ!

ಗುರುವಾರ, 20 ಜನವರಿ 2022, ಮಂಗಳೂರು

ಮೇಷ
ವೃತ್ತಿಗೆ ಸಂಬಂಸಿ ನಿರ್ಧಾರ ತಾಳುವಾಗ ಸಾಕಷ್ಟು ಯೋಚಿಸಿ. ಅವಸರದ ತೀರ್ಮಾನ ಬೇಡ. ಆರೋಗ್ಯ ಸಮಸ್ಯೆ ಕಾಡಬಹುದು. ಏಕಾಂತ ಬಯಸುವಿರಿ.

ವೃಷಭ
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಸಿ. ಒಂದಕ್ಕೆ ಆದ್ಯತೆ ನೀಡಿ ಮತ್ತೊಂದನ್ನು ಅಲಕ್ಷಿಸದಿರಿ. ಬಂಧುತ್ವ ಉಳಿಸಿಕೊಳ್ಳಿ.

ಮಿಥುನ
ವೃತ್ತಿಯಲ್ಲಿ ಕೆಲವು ಅಡ್ಡಿ ಎದುರಿಸುವಿರಿ. ಅದರಿಂದ ಉದ್ವಿಗ್ನತೆ. ಆದರೆ ಸಂಜೆ ವೇಳೆಗೆ ಎಲ್ಲವೂ ನಿರಾಳವಾಗುವುದು. ಕೌಟುಂಬಿಕ ಸಹಕಾರ.

ಕಟಕ
ಉದ್ಯೋಗ ಬದಲಾವಣೆಗೆ ಸಕಾಲ. ಅಂತಃಪ್ರೇರಣೆಯಂತೆ  ನಡಕೊಳ್ಳಿ. ಅದು ನಿಮಗೆ ಒಳಿತೇ ತರಲಿದೆ. ಇತರರ ಚಾಡಿ ಮಾತು ಕೇಳಲು ಹೋಗದಿರಿ.

ಸಿಂಹ
ಬಾಕಿ ಉಳಿದಿರುವ ಪ್ರಮುಖ ಕಾರ್ಯ ಇಂದು ಪೂರೈಸುವಿರಿ. ಬಂಧುಗಳ ಜತೆಗಿನ ಸಂಘರ್ಷ ವಿಕೋಪಕ್ಕೆ ಕೊಂಡೊಯ್ಯದಿರಿ. ಸಮಾಧಾನವಿರಲಿ.

ಕನ್ಯಾ
ಕಾರ್ಯಗಳನ್ನು ಅವಸರ ದಿಂದ ಮುಗಿಸಲು ಹೊರಡಬೇಡಿ. ಅದರಿಂದ ಪ್ರಮಾದ ವಾದೀತು. ಎಲ್ಲವನ್ನು ಯೋಜಿಸಿ, ಯೋಚಿಸಿ ಮುನ್ನಡೆಯಿರಿ.

ತುಲಾ
ವೃತ್ತಿಯಲ್ಲಿ ರಾಜತಾಂತ್ರಿಕ ಕೌಶಲ ಉಪಯೋಗಿಸಿ. ನಿಮ್ಮ ಪ್ರಾಮಾಣಿಕ ಅನಿಸಿಕೆ ಕೆಲವರಿಗೆ ಕಹಿ ಎನಿಸಬಹುದು. ನಿಮ್ಮ ಆಕ್ರೋಶದ ಮೇಲೆ ನಿಯಂತ್ರಣವಿರಲಿ.

ವೃಶ್ಚಿಕ
ಹೊಸ ಯೋಜನೆಯಲ್ಲಿ ಹಣ ಹೂಡುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಏಕೆಂದರೆ ಧನನಷ್ಟ ಸಂಭವಿಸಬಹುದು. ಕೌಟುಂಬಿಕ ಒತ್ತಡ.

ಧನು
ವೃತ್ತಿಯಲ್ಲಿನ ಸವಾಲನ್ನು ಸಮರ್ಥವಾಗಿ ನಿಭಾಯಿಸುವಿರಿ. ಆದರೆ ಕೌಟುಂಬಿಕ ಪರಿಸ್ಥಿತಿಯೇ ನಿಮಗೆ ನೈಜ ಸವಾಲೆನಿಸಲಿದೆ. ಸಹನೆ ಕಾಯ್ದುಕೊಳ್ಳಿ.

ಮಕರ
ಮನೆಯಲ್ಲಿ  ಅಭಿಪ್ರಾಯ ಭೇದ ಉಂಟಾದೀತು. ಅದರಿಂದ ವಾಗ್ವಾದ. ಸಂಘರ್ಷದ ಮನಸ್ಥಿತಿ ದೀರ್ಘಕಾಲ ಉಳಿಸದಿರಿ. ಅದರಿಂದ ನೆಮ್ಮದಿಭಂಗ. ಸಂಯಮವಿರಲಿ.

ಕುಂಭ
ನಿಮ್ಮ ದೈನಂದಿನ ಕಾರ್ಯವ್ಯವಹಾರದಲ್ಲಿ ಬಾರೀ ಬದಲಾವಣೆ ಮಾಡಬೇಡಿ. ಇತರರ ಜತೆ ಹೊಂದಾಣಿಕೆ ಅತಿ ಮುಖ್ಯ. ಆರ್ಥಿಕ ಒತ್ತಡ ಉಂಟಾದೀತು.

ಮೀನ
ಕೌಟುಂಬಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಸಣ್ಣ ವಿಷಯವು ಮನಸ್ತಾಪಕ್ಕೆ ಕಾರಣವಾಗದಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!