ದಿನಭವಿಷ್ಯ: ಈ ರಾಶಿಯವರು ಇಂದು ತಮ್ಮ ಕೋಪದ ಮೇಲೆ ನಿಯಂತ್ರಣ ಹೊಂದಬೇಕು…

ದಿನಭವಿಷ್ಯ

ಮೇಷ
ನಿಮ್ಮ ಕೋಪದ ಮೇಲೆ ನಿಯಂತ್ರಣ ಹೊಂದಬೇಕು. ಇಲ್ಲವಾದರೆ ಸಂಘರ್ಷ ಉಂಟಾದೀತು. ಕೆಟ್ಟ ಆಹಾರದಿಂದ ದೂರವಿರಿ.

ವೃಷಭ
ನಿಗದಿಪಡಿಸಿದಂತೆ ಎಲ್ಲ ಕಾರ್ಯ ಸುಸೂತ್ರವಾಗುವುದು. ಅನಿರೀಕ್ಷಿತ ವಲಯದಿಂದ ಸಹಕಾರ ದೊರಕುವುದು. ಆರ್ಥಿಕ ಪರಿಸ್ಥಿತಿ ಪೂರಕವಾಗುವುದು.

ಮಿಥುನ
ಬಾಕಿ ಉಳಿದಿರುವ ಕಾರ್ಯವನ್ನು ಇಂದು ಮುಗಿಸಿರಿ. ಇಲ್ಲವಾದರೆ ಒತ್ತಡಕ್ಕೆ ಸಿಲುಕುವಿರಿ. ಒತ್ತಡಗಳು ನಿಮ್ಮ ಕಾರ್ಯದ ಮೇಲೆ ಪರಿಣಾಮ ಬೀರದಿರಲಿ.

ಕಟಕ
ಕೆಲಸದ ಒತ್ತಡ ಅಧಿಕ. ನಿಮ್ಮ ಸಹನೆ ಕೆಣಕುವ ಪ್ರಸಂಗಗಳು ಉದ್ಭವಿಸಬಹುದು. ಅನವಶ್ಯ ವಾದದಲ್ಲಿ ತೊಡಗಬೇಡಿ. ಮನಶ್ಯಾಂತಿಗೆ ತೊಡಕು.

ಸಿಂಹ
ಉದ್ಯೋಗದಲ್ಲಿ ಹೊಸ ಅವಕಾಶಗಳು ಬರುತ್ತವೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಆರೋಗ್ಯ ಸಮಸ್ಯೆ ಕಾಡಬಹುದು. ಮುಂಜಾಗ್ರತೆ ವಹಿಸಿರಿ. ಖರ್ಚು ಹೆಚ್ಚಳ.

ಕನ್ಯಾ
ವೃತ್ತಿಯಲ್ಲಿ ನಿಮ್ಮ ಏಳಿಗೆಗೆ ಪೂರಕ ಬೆಳವಣಿಗೆ. ವ್ಯಕ್ತಿಯೊಬ್ಬರು ಉತ್ತಮ ಸಹಕಾರ ಕೊಡುವರು. ಪ್ರೀತಿಯ ವಿಷಯದಲ್ಲಿ ಶುಭ ಬೆಳವಣಿಗೆ.

ತುಲಾ
ಕೌಟುಂಬಿಕ ವಿಷಯಗಳು ಚಿಂತೆಗೆ ಕಾರಣವಾಗುತ್ತವೆ. ಆದರೆ ಅದಕ್ಕೆ ಪರಿಹಾರವೂ ಸಿಗುತ್ತದೆ. ಹಾಗಾಗಿ ದಿನದಂತ್ಯಕ್ಕೆ ಎಲ್ಲವೂ ಸುಗಮ

ವೃಶ್ಚಿಕ
ನಿಮ್ಮ ಉತ್ಸಾಹ ಕುಂದಿಸುವ ಬೆಳವಣಿಗೆ ಸಂಭವಿಸಬಹುದು. ಕೆಲವರ ಟೀಕೆಗಳನ್ನು ಕೇಳುವಿರಿ. ನಿಮ್ಮ ವರ್ತನೆ ತಿದ್ದಿಕೊಳ್ಳಬೇಕಾದ ಸಂದರ್ಭ.

ಧನು
ಕೌಟುಂಬಿಕವಾಗಿ ಎಲ್ಲರೂ ಸೇರುವಂತಹ ಅವಕಾಶ. ವೈವಾಹಿಕ ಸಂಬಂಧದಲ್ಲಿ ಪೂರಕ ಬೆಳವಣಿಗೆ. ಬಂಧುಗಳಿಂದ ಉತ್ತಮ ಸಹಕಾರ.

ಮಕರ
ಮನಸ್ಸು ಕ್ಷೆಭೆಗೆ ಒಳಗಾಗುವ ಪ್ರಸಂಗ ಉಂಟಾದೀತು. ಅದನ್ನು ಸಮಾಧಾನದಿಂದ ನಿಭಾಯಿಸಿ. ಆತುರದ ತೀರ್ಮಾನ ತೆಗೆದುಕೊಳ್ಳದಿರಿ.

ಕುಂಭ
ಖಾಸಗಿ ಬದುಕಿಗೆ ಹೆಚ್ಚು ಆದ್ಯತೆ ಕೊಡಬೇಕು. ಕೆಲವು ವ್ಯಕ್ತಿಗಳು ನಿಮ್ಮ ಬದುಕಿನಲ್ಲಿ ಏರುಪೇರಿಗೆ ಕಾರಣರಾಗುತ್ತಾರೆ. ಅವರನ್ನು ಸೂಕ್ತವಾಗಿ ನಿಭಾಯಿಸಿ.

ಮೀನ
ನಿಮ್ಮ ನಿರೀಕ್ಷೆಗಿಂತ ಹೆಚ್ಚು ಖರ್ಚು ಒದಗಿಬರುತ್ತದೆ. ದೈಹಿಕ ಸಮಸ್ಯೆಗಳು ಕಾಡಬಹುದು. ಕೌಟುಂಬಿಕ ಸಮಾಧಾನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!