ದಿನಭವಿಷ್ಯ : ಶಾಂತ ಮನಸ್ಥಿತಿ ಇರಲಿದೆ, ಅದಕ್ಕೆ ನಿರ್ಧಾರವೂ ಅತ್ಯುತ್ತಮವಾಗಲಿದೆ!

ಮೇಷ
ನಿಮಗಿಂದು ಉತ್ತಮ ದಿನ. ಕ್ಷಿಪ್ರ ಕಾರ್ಯಸಿದ್ಧಿ. ಖಾಸಗಿ ಬದುಕಲ್ಲಿ ಮತ್ತು  ವೃತ್ತಿಯಲ್ಲಿ ನಿಮ್ಮ ಉದ್ದೇಶ ಸಾಧಿಸಿಕೊಳ್ಳುವಿರಿ. ಬಂಧುಜನರ ಭೇಟಿ.

ವೃಷಭ
ಫಲಪ್ರದ ದಿನ. ಮುಂಜಾನೆ ಸಮಸ್ಯೆ ತಲೆದೋರಿದರೂ ಸಂಜೆ ವೇಳೆಗೆ ಎಲ್ಲವೂ ನಿರಾಳವಾಗುವುದು. ಧ್ವಂದ್ವವೊಂದು ಕೊನೆಗೊಳ್ಳುವುದು.

ಮಿಥುನ
ವೃತ್ತಿಯಲ್ಲಿ ಪ್ರಗತಿ. ಆರ್ಥಿಕ ಬಿಕ್ಕಟ್ಟು ಪರಿಹಾರ. ಸಡಿಲ ಮಾತು ಬೇಡ. ಅದು ನಿಮ್ಮನ್ನು ಬಿಕ್ಕಟ್ಟಿಗೆ ತಳ್ಳಬಹುದು. ಹೊಂದಾಣಿಕೆ ಮುಖ್ಯ.

ಕಟಕ
ಶಾಂತ ಮನಸ್ಥಿತಿ. ಹಾಗಾಗಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ನಿಮ್ಮ ಕೌಶಲ, ಕಾರ್ಯ ಜನಮನ್ನಣೆ ಪಡೆಯುವುದು.

ಸಿಂಹ
ಯಾವುದಾದರೂ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಅದರ ಪರಿಹಾರಕ್ಕೆ ಮುಂದಾಗಿ. ಬರಿದೇ ಚಿಂತಿಸುತ್ತಾ ಕೂರದಿರಿ. ಎಲ್ಲವೂ ನಿಮ್ಮ ಪರವಾಗುವುದು.

ಕನ್ಯಾ
ಖಾಸಗಿ ಬದುಕಿನಲ್ಲಿ ಅನಪೇಕ್ಷಿತ ಬೆಳವಣಿಗೆ. ಆದರೆ ಅದು ನಿಮಗೆ ಸಂತೋಷವನ್ನೆ ತರುವುದು. ಆರ್ಥಿಕ ಬಿಕ್ಕಟ್ಟು ಪರಿಹಾರ.  ಬಂಧುಗಳ ಭೇಟಿ.

ತುಲಾ
ನಿಮ್ಮ ಕಾರ್ಯ ಮುಗಿಸಲು ಹೆಚ್ಚು ಶ್ರಮ ಹಾಕಬೇಕು. ಇದರಿಂದ ಹತಾಶೆ, ಅಸಹನೆ ಉಂಟಾದೀತು. ಅತಿಯಾದ ಕೆಲಸದಿಂದ ಬಳಲಿಕೆ.

ವೃಶ್ಚಿಕ
ಕೆಲ ವಿಷಯದಲ್ಲಿ ಗೊಂದಲ ಕಾಡುವುದು. ಅದನ್ನು ಮೊದಲು ನೀಗಿಕೊಳ್ಳಿ. ಅಂತಿಮವಾಗಿ ಗುರಿಸಾಧನೆಯಲ್ಲಿ ಸಫಲತೆ. ಆಪ್ತ ಬಂಧುವಿನ ಸಹಕಾರ.

ಧನು
ನಿಮ್ಮ ಕೆಲಸದ ಪ್ರಗತಿಯ ಕುರಿತು ಚಿಂತೆ ಕಾಡುವುದು. ನಿರೀಕ್ಷಿಸಿದಂತೆ ಎಲ್ಲವೂ ಸಾಗುತ್ತಿಲ್ಲ ಎಂಬ ಬೇಸರ. ಅನಿರೀಕ್ಷಿತ ನೆರವು ಒದಗಿಬರುವುದು.

ಮಕರ
ಆರ್ಥಿಕವಾಗಿ ನಿಮಗೆ ಪೂರಕ ದಿನ. ಆರೋಗ್ಯದ ಕಡೆ ಗಮನ ಕೊಡಿ. ಚರ್ಮದ ಅಲರ್ಜಿ, ಹೊಟ್ಟೆ ಕೆಡುವಂತಹ ಪ್ರಸಂಗ ಉಂಟಾದೀತು. ಕೌಟುಂಬಿಕ ಸೌಹಾರ್ದ.

ಕುಂಭ
ನಿಮ್ಮ ಕಾರ್ಯ ಸುಗಮವಾಗಿ ಸಾಗದು. ಹಣದ ವಿಷಯದಲ್ಲಿ ಮಹತ್ವದ ನಿರ್ಧಾರ ತಾಳದಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ.

ಮೀನ
ಸಂತೋಷದ ಮನಸ್ಥಿತಿ. ಅದಕ್ಕೆ ಕಾರಣ ನೀವು ಬಯಸಿದಂತೆ ಎಲ್ಲವೂ ಸಾಗುತ್ತಿರುವುದು. ಕೌಟುಂಬಿಕ ಸಾಮರಸ್ಯ. ಉದ್ಯೋಗದಲ್ಲಿ  ಉನ್ನತಿ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!