ದಿನಭವಿಷ್ಯ : ಬಹುದಿನಗಳಿಂದ ಕಾಡುತ್ತಿರುವ ದೈಹಿಕ ನೋವಿನಿಂದ ಶಮನ ಪಡೆಯುವಿರಿ, ದಿನ ನಿರಾಳ

ಮೇಷ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಕೆಲಸವು ಅರ್ಧದಲ್ಲೆ ನಿಂತೀತು. ಆಹಾರ ಸೇವನೆ ಹಿತಮಿತವಿರಲಿ. ಅಜೀರ್ಣ ಸಮಸ್ಯೆ.

ವೃಷಭ
ಆರ್ಥಿಕ ಒತ್ತಡ. ಮಾನಸಿಕ ಕಿರಿಕಿರಿ. ಇದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸುವುದು. ಆಪ್ತರೊಂದಿಗೆ ಸಹನೆ ಯಿಂದ ವರ್ತಿಸಿ.

ಮಿಥುನ
ಸಹೋದ್ಯೋಗಿಗಳ ಜತೆ ವಾಗ್ವಾದ ತಪ್ಪಿಸಿ. ಅದು ವಿಕೋಪಕ್ಕೆ ಹೋದೀತು. ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಕೌಟುಂಬಿಕ ಅಶಾಂತಿ.

ಕಟಕ
ಕಾಡುತ್ತಿರುವ ದೈಹಿಕ ನೋವಿನಿಂದ ಶಮನ ಪಡೆಯುವಿರಿ. ಮನೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯಿಂದ ಮುಕ್ತಿ ನಿರಾಳತೆ.

ಸಿಂಹ
ಮಾನಸಿಕ ಚಿಂತೆ. ಅದಕ್ಕೆ ಸ್ಪಷ್ಟ ಕಾರಣವೇ ಬೇಕೆಂದಿಲ್ಲ. ಏಕಾಗ್ರತೆ ಕಷ್ಟ. ಸಂಬಂಧದಲ್ಲಿಯೂ ಬಿರುಕು ಉಂಟಾದೀತು. ಸಂಯಮದ ನಡೆಯಿರಲಿ.

ಕನ್ಯಾ
ವೃತ್ತಿ ಬಿಕ್ಕಟ್ಟು ಎದುರಾಗಲಿದೆ. ಹಾಗೇ ಮುಂದುವರಿಸದಿರಿ. ಶೀಘ್ರ ಇತ್ಯರ್ಥಪಡಿಸಿ.ಆರ್ಥಿಕ ಉನ್ನತಿಗೆ ಎಡರುತೊಡರುಗಳು.

ತುಲಾ
ಕೌಟುಂಬಿಕ ಬಿಕ್ಕಟ್ಟು ಪರಿಹರಿಸಲು ಗಮನ ಕೊಡಿ. ಅದನ್ನು ದೀರ್ಘ ಎಳೆಯಲು ಬಿಡಬೇಡಿ. ಬಂಧುಗಳ ಅನವಶ್ಯ ಹಸ್ತಕ್ಷೇಪ ತಪ್ಪಿಸಿರಿ.

ವೃಶ್ಚಿಕ
ದಿನವಹಿ ಕರ್ತವ್ಯ ನೆರವೇರಿಸಲು ಇದ್ದ  ಅಡ್ಡಿ ತೊಲಗುವುದು. ವಿರೋಧ ಅಂತ್ಯ. ಹಣ ಗಳಿಕೆಯ ಹಾದಿ ಸುಗಮವಾಗಲಿದೆ. ಕೌಟುಂಬಿಕ ಸಂತೃಪ್ತಿ.

ಧನು
ವೃತ್ತಿಯಲ್ಲಿ  ಪ್ರಗತಿ. ಕಾರ್ಯಸಿದ್ಧಿ. ಪ್ರಿಯರ ಭೇಟಿಯಿಂದ ಸಂತೋಷ. ಕುಟುಂಬಸ್ಥರ ಸಹಕಾರದಿಂದ
ಕಾರ್ಯ ಸಫಲತೆ.

ಮಕರ
ಮನಶ್ಯಾಂತಿ ಕದಡಿದ್ದ ಪ್ರಸಂಗವು ಸುಖಾಂತ್ಯ ಕಾಣಲಿದೆ. ನಿಮ್ಮ ಉದ್ದೇಶದಂತೆ ಎಲ್ಲವೂ ನೆರವೇರುವುದು.  ತುಸು ಆರ್ಥಿಕ ಬಿಕ್ಕಟ್ಟು.

ಕುಂಭ
ಖಾಸಗಿ ಬದುಕಿನಲ್ಲಿ ಕೆಲವು ಸಂಕಷ್ಟ ಬರಬಹುದು. ನೆಮ್ಮದಿ ದೂರ.ಇದರಿಂದ ದೇವರು, ಅಧ್ಯಾತ್ಮದತ್ತ ಮನಸ್ಸು  ವಾಲಬಹುದು.

ಮೀನ
ವಿಶೇಷಗಳಿಲ್ಲದ ಸಾಮಾನ್ಯ ದಿನ. ವೃತ್ತಿಯಲ್ಲಿ  ಕೆಲಸ ಕಡಿಮೆ. ಕೌಟುಂಬಿಕ ಕಾರ್ಯಗಳೂ ಹೆಚ್ಚು ಬಾಧಿಸಲಾರವು. ಬಂಧುಗಳ ಭೇಟಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!