ದಿನಭವಿಷ್ಯ : ಇಂದು ಬೇರೆಯವರ ವಿಷಯಕ್ಕೆ ಮೂಗು ತೂರಿಸದಿದ್ರೆ ಉತ್ತಮ

ಮೇಷ
ಇತರರ ವ್ಯವಹಾರದಲ್ಲಿ ಮೂಗು ತೂರಿಸದಿರಿ.  ಹೆಚ್ಚಿನವರು ಅದನ್ನು ಇಷ್ಪಪಡಲಾರರು. ಆರೋಗ್ಯ ಸಮಸ್ಯೆ ಉಂಟಾದೀತು. ಧನವ್ಯಯವಾದೀತು.

ವೃಷಭ
ಶಿಕ್ಷಣ, ಬ್ಯಾಂಕ್, ವಿತ್ತ ಕ್ಷೇತ್ರದ ಮಂದಿಗೆ ಇಂದು  ಯಶಸ್ವೀ  ದಿನ. ಹೂಡಿಕೆಯಿಂದ ಲಾಭ. ಸಂಗಾತಿಗಳ ನಡುವಿನ ಮನಸ್ತಾಪ ನಿವಾರಣೆ. ಸಾಮರಸ್ಯ.

ಮಿಥುನ
ಮನೆಯಲ್ಲಿ ಸಣ್ಣ ವಿಷಯಕ್ಕೂ ಜಗಳ ಉಂಟಾದೀತು. ಸಹನೆಯಿಂದ ವರ್ತಿಸುವುದು ಅವಶ್ಯ. ಆರ್ಥಿಕ ಸ್ಥಿತಿ ತೃಪ್ತಿಕರ. ಆರೋಗ್ಯ ಸುಸ್ಥಿರ.

ಕಟಕ
ವೃತ್ತಿಯಲ್ಲಿ ಕೆಲಸದ ಒತ್ತಡ ಕಡಿಮೆ. ಹಾಗಾಗಿ ನಿರಾಳತೆ ಅನುಭವಿಸುವಿರಿ. ದೀರ್ಘಾವಧಿ ಹಣ ಹೂಡಿಕೆಯಿಂದ ಲಾಭವಿದೆ.

ಸಿಂಹ
ಆಪ್ತರ ಜತೆಗೆ  ವಾಗ್ವಾದ ಉಂಟಾದೀತು. ಸಣ್ಣ ವಿಷಯಕ್ಕೆ ಇಂತಹ ವಾದ ಬೇಕೆ ಎಂದು ಯೋಚಿಸಿ. ಆಗ ಎಲ್ಲವೂ ಶಾಂತಿಯುತವಾಗಿ ಕೊನೆಗೊಳ್ಳುವುದು.

ಕನ್ಯಾ
ನಿಮ್ಮ ನಿಲುವಿನಲ್ಲಿ ಬದಲಾವಣೆ ಉಂಟಾಗುವ ಪ್ರಸಂಗ ಸಂಭವಿಸಬಹುದು. ಸ್ನೇಹಿತರೇ ನಿಮ್ಮ ವಿರುದ್ಧ ತಿರುಗಿ ಬಿದ್ದಾರು. ಕೌಟುಂಬಿಕ ಆಶಾಂತಿ.

ತುಲಾ
ಆಪ್ತರೊಂದಿಗಿನ ವ್ಯವಹಾರದಲ್ಲಿ ಎಚ್ಚರ ವಹಿಸಿ. ನಿಮಗೆ ಹಿನ್ನಡೆ ಉಂಟಾದೀತು. ಆದರೆ ಅದನ್ನು ಹೇಳಲಾಗದ ಪರಿಸ್ಥಿತಿ. ಆರೋಗ್ಯ ಸಮಸ್ಯೆ ಸಂಭವ.

ವೃಶ್ಚಿಕ
ಇಂದು ತಾಳ್ಮೆಯಿಂದ ವ್ಯವಹರಿಸಿ. ಅನವಶ್ಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಡಿ. ಅಪಥ್ಯ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು. ಮಿತಾಹಾರ ಮುಖ್ಯ.

ಧನು
ವೃತ್ತಿಯಲ್ಲಿ ಒಂದೇ ಕೆಲಸವನ್ನು ಬಾರಿ ಬಾರಿ ಮಾಡಬೇಕಾದ ಪ್ರಸಂಗ ಉಂಟಾದೀತು. ಅಸಹನೆ ಹೆಚ್ಚುವುದು. ಕೆಲವರ ವರ್ತನೆ ನಿಮಗೆ ಸರಿಕಾಣದಿರಬಹುದು.

ಮಕರ
ನಿಮ್ಮ ಬಗ್ಗೆಯೆ ಅಪನಂಬಿಕೆ ಬೇಡ. ನಿಮ್ಮಲ್ಲಿ  ಸಾಮರ್ಥ್ಯವಿದೆ ಎಂಬುದನ್ನು ಅರಿಯಿರಿ. ಇತರರ ಜತೆ ಇನ್ನಷ್ಟು ಆಳವಾಗಿ ಸಂವಹನ ಸಾಧಿಸಿರಿ.

ಕುಂಭ
ಹಣದ ವಿಚಾರದಲ್ಲಿ ಹೊಸ ಸಾಹಸಕ್ಕೆ ತುಡಿತ ಉಂಟಾದೀತು. ಹಲವರ ಸಲಹೆ ಬಂದೀತು. ಆದರೆ ಎಚ್ಚರಿಕೆಯಿಂದ ಹೆಜ್ಜೆಯಿಡಿ ಎಂದು ಗ್ರಹಗತಿ ಹೇಳುತ್ತಿದೆ.

ಮೀನ
ಇಂದು ಅನಿರೀಕ್ಷಿತ ಧನಲಾಭ. ಕೌಟುಂಬಿಕ ಸಹಕಾರ, ಸಾಮರಸ್ಯ. ತಂಪು ಆಹಾರ ಸೇವಿಸದಿರಿ. ಅದರಿಂದ ಆರೋಗ್ಯ ಕೆಡಬಹುದು.   ಸ್ನೇಹಿತರ ನೆರವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!