ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಲಾಗುವುದು. ಮಂದಿರ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಮಹಾರಾಷ್ಟ್ರ ಸರ್ಕಾರ ದಾನವಾಗಿ ನೀಡಿದೆ. ಮಹಾರಾಷ್ಟ್ರ ಸಚಿವರು ಈಗಾಗಲೇ ಶ್ರೀವಾರಿ ದೇಗುಲ ನಿರ್ಮಾಣಕ್ಕೆ ಭೂ ದಾಖಲೆಗಳನ್ನು ಟಿಟಿಡಿಗೆ ಸಲ್ಲಿಸಿದ್ದಾರೆ. ಶ್ರೀವಾರಿ ದೇವಾಲಯ ಕಟ್ಟುವ ಕಾರ್ಯಕ್ಕೆ ರೇಮಂಡ್ ಕಂಪನಿ ಕೈ ಹಾಕಿದೆ.
ಮಹಾರಾಷ್ಟ್ರ ಸರ್ಕಾರದ ಪರವಾಗಿ, ಪ್ರವಾಸೋದ್ಯಮ ಸಚಿವ ಶ್ರೀ ಆದಿತ್ಯ ಠಾಕ್ರೆ, ಸರ್ಕಾರ ನೀಡಿದ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಟಿಟಿಡಿಗೆ ಹಸ್ತಾಂತರಿಸಿದರು. ಶನಿವಾರ (ಏಪ್ರಿಲ್ 30,2022) ರಂದು ತಿರುಮಲದ ಅನ್ನಮಯ್ಯ ಭವನದಲ್ಲಿ ಟಿಟಿಡಿ ಮಂಡಳಿ ಸಭೆ ಪ್ರಾರಂಭವಾಗುವ ಮೊದಲು ಅಧ್ಯಕ್ಷ ಶ್ರೀ ವೈವಿ ಸುಬ್ಬಾರೆಡ್ಡಿ, ಟಿಟಿಡಿ ಮೇಲಧಿಕಾರಿಗಳ ಸಮ್ಮುಖದಲ್ಲಿ ಪತ್ರಗಳನ್ನು ಸಲ್ಲಿಸಿದರು.
ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ಎಂಡಿ ಶ್ರೀ ಗೌತಮ್ ಸಿಂಘಾನಿಯಾ ಪರವಾಗಿ, ರೇಮಂಡ್ ಲಿಮಿಟೆಡ್ ಉಪಾಧ್ಯಕ್ಷ ಶ್ರೀ ಸಂಜೀವ್ ಸರಿನ್ ಅವರು ದೇವಾಲಯದ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಮುಂಬೈನ ಉಲ್ವೆಯಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಶ್ರೀವಾರಿ ದೇವಸ್ಥಾನದ ಸಂಪೂರ್ಣ ವೆಚ್ಚವನ್ನು ಭರಿಸಲು ಮುಂದೆ ಬಂದಿದ್ದಕ್ಕಾಗಿ ರೇಮಂಡ್ ಗ್ರೂಪ್ನ ಅಧ್ಯಕ್ಷ ಶ್ರೀ ಗೌತಮ್ ಸಿಂಘಾನಿಯಾ ಅವರಿಗೆ ಟಿಟಿಡಿ ಅಧ್ಯಕ್ಷರು ಧನ್ಯವಾದ ತಿಳಿಸಿದರು.