ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ (ಅ.16 )ಭಾನುವಾರ ರಾಜಧಾನಿಯ ಬಹುತೇಕ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ನಾಳೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 61ನೇ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮ್ಯಾರಥಾನ್ ಆಯೋಜಿಸಲಾಗಿದ್ದು, ಇದರಿಂದ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 4ರಿಂದ 11 ಗಂಟೆಯವರೆಗೂ ಎಲ್ಲಾ ವಿಧದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಯಾವ ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಕಸ್ತೂರಬಾ ರಸ್ತೆಯ ಹಡ್ಸನ್ ಸರ್ಕಲ್ ನಿಂದ ಸಿದ್ಧಲಿಂಗಯ್ಯ ಜಂಕ್ಷನ್ವರೆಗೆ
ಅಂಬೇಡ್ಕರ್ ರಸ್ತೆಯ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್ವರೆಗೆ
ರಾಜಭವನ ರಸ್ತೆಯ ಸಿಟಿಓ ಸರ್ಕಲ್ ನಿಂದ ತಿಮ್ಮಯ್ಯ ಜಂಕ್ಷನ್ವರೆಗೆ
ಕ್ವೀನ್ಸ್ ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ಸಿಟಿಓ ಸರ್ಕಲ್ವರೆಗೆ
ಎಂ.ಜಿ.ರಸ್ತೆಯ ಕ್ವೀನ್ಸ್ ಸರ್ಕಲ್ ನಿಂದ ವೆಬ್ಸ್ ಜಂಕ್ಷನ್ವರೆಗೆ
ಸಿದ್ಧಲಿಂಗಯ್ಯ ಜಂಕ್ಷನ್ ನಿಂದ ಕ್ವೀನ್ಸ್ ಸರ್ಕಲ್ ವರೆಗೆ
ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ .
ಬದಲಿ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ.