ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೀರ್ ಖಾನ್ ಪೇಟ್ ಅತಿಥಿ ಗೃಹದಲ್ಲಿ ಟಿಆರ್ಎಸ್ವಿ ಮುಖಂಡರು ಗನ್ನಿಂದ ಗುಂಡು ಹಾರಿಸಿದ್ದಾರೆ. ಟಿಆರ್ಎಸ್ವಿ ಮಂಡಲ ಅಧ್ಯಕ್ಷ ವಿಘ್ನೇಶ್ವರ್ ರೆಡ್ಡಿ ಮತ್ತು ವಿಕ್ರಮ್ ಗಾಳಿಯಲ್ಲಿ ಗುಂಡು ಹಾರಿಸಿದರು. ಗುಂಡು ಹಾರಿಸಿದ್ದು ಮಾತ್ರವಲ್ಲದೆ, ಶೂಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಿ ತಮ್ಮ ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ. ಈ ಘಟನೆ ಹೈದರಾಬಾದ್ನಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.
ಆಡಳಿತ ಪಕ್ಷದ ನಾಯಕರೊಬ್ಬರ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಇದೆಲ್ಲ ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅದು ಏರ್ ಗನ್ ಆಗಿದೆಯೇ? ಅಥವಾ ಮೂಲ ಬಂದೂಕಾ? ಎಂಬುದು ತಿಳಿಯಬೇಕಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸಾಕ್ಷ್ಯಗಳನ್ನೂ ಸಂಗ್ರಹಿಸಲಾಗಿದೆ. ಗುಂಡಿನ ದಾಳಿಯ ದೃಶ್ಯಗಳನ್ನು ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿದ್ದರಿಂದ ಈ ವಿಷಯ ಬೆಳಕಿಗೆ ಬಂದಿದೆ. ಫೈರಿಂಗ್ ಏಕೆ ಮಾಡಲಾಯಿತು? ಆ ಬಂದೂಕುಗಳು ಅವರಿಗೆ ಎಲ್ಲಿಂದ ಬಂದವು? ಅವರಿಗೆ ಕೊಟ್ಟವರು ಯಾರು? ಆ ಅತಿಥಿ ಗೃಹದಲ್ಲಿ ಬೇರೆ ಯಾರಿದ್ದಾರೆ? ಈ ದಿಸೆಯಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ.
ಈಗಾಗಲೇ ಸಚಿವ ಶ್ರೀನಿವಾಸ್ ಗೌಡ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಈ ಪ್ರಕರಣ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಒಂದು ವೇಳೆ ಮಿಸ್ ಫೈರಿಂಗ್ ನಡೆದು ಯಾರದ್ದಾದರೂ ಪ್ರಾಣ ಕಳೆದುಕೊಂಡಿದ್ದರೆ ಏನಾಗುತ್ತಿತ್ತು? ಶ್ರೀನಿವಾಸಗೌಡ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಆ ಘಟನೆ ಮರೆಯುವ ಮುನ್ನವೇ ಆಡಳಿತ ಪಕ್ಷದ ಮತ್ತೊಬ್ಬ ನಾಯಕ ಗಾಳಿಯಲ್ಲಿ ಬಂದೂಕು ಹಾರಿಸಿ ಸ್ಟೇಟಸ್ ಹಾಕುತ್ತಿರುವುದು ಭಾರೀ ಸಂಕಷ್ಟಕ್ಕೆ ಕಾರಣವಾಗಿದೆ.