ಹೊಸದಿಗಂತ ವರದಿ,ಕಲಬುರಗಿ:
ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಿರಿಯಾಣ ಹತ್ತಿರ ನಡೆದಿದೆ.
ರಫೀಕ್ ಸಲೀಂ (35), ಸುಮೀತ್ರಾ (41) ಎಂಬವವರೇ ಮೃತರು ಎಂದು ಗುರುತಿಸಲಾಗಿದೆ. ಮೃತರು ತೆಲಂಗಾಣ, ದ ತಾಂಡೂರ ನಿವಾಸಿಗಳು ಎಂದು ತಿಳಿದುಬಂದಿದೆ.
ಬೈಕ್ ಸವಾರರು ಚಿಂಚೋಳಿಯಿಂದ ತಾಂಡೂರ ಕಡೆಗೆ ಹೊರಟಿದ್ದರು.ಲಾರಿಯೂ ತಾಂಡೂರ ಕಡೆಯಿಂದ ಹೊರಟಿತ್ತು.ಈ ಎರಡ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸೋವೀಗಿಡಾದ ದುಘ೯ಟನೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರಿಯಾಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.