ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಟಿ. ನರಸೀಪುರದ ಖಾಸಗಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಯುವತಿಯನ್ನು ಮೂವರು ಖದೀಮರು ಅಪಹರಿಸಿದ್ದು, ಬಳಿಕ ಚಾಮರಾಜನಗರ ತಾಲೂಕಿನ ಸಂತೆಮರಳ್ಳಿಯ ಲಾಡ್ಜ್ವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ಸ್ಟೇಟ್ಮೆಂಟ್ ಬೇರೆ ರೀತಿಯೇ ಇದೆ!
ಮಹಿಳೆ ಒಪ್ಪಿಗೆಯಿಂದಲೇ ನಮ್ಮ ಜೊತೆ ಬಂದಿದ್ದಾರೆ. ನಾವು ಕಿಡ್ನಾಪ್ ಮಾಡಿಲ್ಲ. ಲಾಡ್ಜ್ನಲ್ಲಿ ವಿಡಿಯೋ ಮಾಡುವ ವಿಚಾರಕ್ಕೆ ನಮ್ಮ ಮಧ್ಯೆ ಗಲಾಟೆ ಆಗಿತ್ತು. ಆಗ ನಾವು ಮಹಿಳೆಯನ್ನು ಅದೇ ಬಸ್ಸ್ಟಾಂಡ್ಗೆ ವಾಪಾಸ್ ಬಿಟ್ಟು ಬಂದೆವು. ಸಿಟ್ಟಿನಲ್ಲಿ ನಮ್ಮ ವಿರುದ್ಧ ಅತ್ಯಾಚಾರದ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣದ ಸತ್ಯಾಸತ್ಯತೆಗಳನ್ನು ತಿಳಿಯಲು ಸಂತ್ರಸ್ತೆಯ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.



