ಹೊಸದಿಗಂತ ವರದಿ,ಮೈಸೂರು:
ಎರಡು ಪ್ರತ್ಯೇಕ ಪ್ರಕರಣದಲ್ಲಿ ಸಾಲಭಾದೆ ತಾಳದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಟ್ಟದಪುರದ ನಿವಾಸಿ ಕುಮಾರೇಗೌಡ (62) ಹಾಗೂ ಕಣಗಾಲು ಗ್ರಾಮದ ನಿವಾಸಿಯಾದ ಸ್ವಾಮಿಗೌಡ (52)ಆತ್ಮಹತ್ಯೆ ಮಾಡಿಕೊಂಡ ರೈತರು.
ತಮ್ಮ ಎರಡು ಎಕರೆ ಜಮೀನಿನಲ್ಲಿ ಹೊಗೆಸೊಪ್ಪು, ಶುಂಠಿ ಬೆಳೆದಿದ್ದ ಕುಮಾರೇಗೌಡರು, ಬೆಟ್ಟದ ಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಒಂದುವರೆ ಲಕ್ಷರೂ, ತಂಬಾಕು ಮಂಡಳಿಯಿAದ 50 ಸಾವಿರ ಹಾಗೂ ಕೈಸಾಲವಾಗಿ 2 ಲಕ್ಷರೂ ಪಡೆದಿದ್ದರು. ಆದರೆ ಬೆಳೆ ಕೈಕೊಟ್ಟ ಕಾರಣ, ಸಾಲ ತೀರಿಸಲಾಗದೆ ಮನನೊಂದು ಗ್ರಾಮದಲ್ಲಿರುವ ತಾವರೆಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 2.10 ಎಕರೆ ಜಮೀನನ್ನು ಹೊಂದಿದ್ದ ಸ್ವಾಮಿಗೌಡರು ಶುಂಠಿ ಹಾಗೂ ತಂಬಾಕನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದರು. ಇದಕ್ಕಾಗಿ ಕಣಗಾಲ ಗ್ರಾಮೀಣ ಬ್ಯಾಂಕ್ನಲ್ಲಿ 2 ಲಕ್ಷರೂ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಲ್ಲಿ 1 ಲಕ್ಷರೂ, 2 ಲಕ್ಷರೂ ಕೈಸಾಲ ಮಾಡಿದ್ದರು. ಬೆಳೆ ಕೈಕೊಟ್ಟ ಕಾರಣ ಸಾಲದ ಭಾದೆ ತಾಳಲಾಗದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬೆಟ್ಟದ ಪುರ ಠಾಣೆಯ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.