ಹೊಸದಿಗಂತ ವರದಿ,ಮೈಸೂರು:
ನ್ಯಾಯ ಬೆಲೆ ಅಂಗಡಿಯೊoದರ ಬಾಗಿಲು ಮುರಿದು ಆನೆಯೊಂದು, ಒಳಗಿದ್ದ ಪಡಿತರ ತಿಂದು, ನಾಶ ಪಡಿಸಿದ ಬಳಿಕ ಪರಾರಿಯಾಗಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ಮನುಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಆಹಾರ ಅರಸಿ ಬಂದ ಕಾಡಾನೆಯೊಂದು ಸೋಲಾರ್ ಬೇಲಿ ಭೇದಿಸಿ ಗ್ರಾಮಕ್ಕೆ ಬಂದಿದೆ.
ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯ ಬಾಗಿಲು ಮುರಿದು, ಒಳಗಿದ್ದ ರಾಗಿ ಚೀಲಗಳನ್ನು ಎಳೆದು ತಿಂದಿದೆ. ರಾತ್ರಿ ಇಷ್ಟೆಲ್ಲಾ ಘಟನೆ ಸಂಭವಿಸಿದ್ದರೂ ಗ್ರಾಮಸ್ಥರ ಗಮನಕ್ಕೆ ಬಂದಿಲ್ಲ. ಮುಂಜಾನೆ ಬಾಗಿಲು ಮುರಿದಿದ್ದ ನ್ಯಾಯಬೆಲೆ ಅಂಗಡಿ ನೋಡಿ ಕಳುವಾಗಿರಬೇಕೆಂದು ಸ್ಥಳಕ್ಕೆ ಬಂದಾಗ ಹೆಜ್ಜೆ ಗುರುತು ಕಂಡು ಕಾಡಾನೆ ಎಂದು ಗ್ರಾಮಸ್ಥರು ದೃಢಪಡಿಸಿಕೊಂಡಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮುನುಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.