ಅಗ್ನಿವೀರ್ ರ‍್ಯಾಲಿ ಮೇಲೆ ಕಣ್ಣು: ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಎನ್‌ಕೌಂಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಅಗ್ನಿವೀರ್ ನೇಮಕಾತಿ ರ‍್ಯಾಲಿ ಮೇಲೆ ದಾಳಿ ಮಾಡಲು ಉಗ್ರರು ಸಂಚು ಹಾಕಿದ್ದು, ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಜೈಶ್ ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ಇವರು ರ‍್ಯಾಲಿ ಮೇಲೆ ದಾಳಿ ನಡೆಸುವ ಸಂಚು ಹಾಕಿದ್ದರು. ಯಡಿಪೋರಾ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿದ್ದು, ದಾಳಿ ವೇಳೆ ಎಡರಡು ಮನೆಗಳು ಧ್ವಂಸವಾಗಿವೆ.

ಗ್ರಾಮದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇಲೆ ಎಸ್‌ಎಸ್‌ಬಿ ಮತ್ತು ಭಾರತೀಯ ಸೇನೆಯು ಶೋಧ ಕಾರ್ಯ ನಡೆಸಿದೆ. ಸೇನೆ ಮೇಲೆ ಉಗ್ರರು ಗುಂಡು ಹಾರಿಸಿದ್ದು, ಸೇನೆ ಪ್ರತಿದಾಳಿ ಮಾಡಿದೆ. ಕಲಾಂಪೋರಾ ಪುಲ್ವಾಮಾ ನಿವಾಸಿ ಯುವರ್ ಶಾಫಿ ಭಟ್ ಮತ್ತು ಶೋಪಿಯಾನ್‌ನ ವೆಶ್ರೋ ನಿವಾಸಿ ಅಮೀರ್ ಹುಸೇನ್ ಭಟ್ ಮೃತ ಭಯೋತ್ಪಾದಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!