ಹೊಸದಿಗಂತ ವರದಿ,ಶಿವಮೊಗ್ಗ :
ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ಇಬ್ಬರು ಹೋರಿಗಳು ತಿವಿದು ಮೃತಪಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಳೂರು ಹಾಗೂ ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಸ್ಪರ್ಧೆಗಳ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಟ್ಟು 06 ಮಂದಿ ಗಾಯಗೊಂಡಿದ್ದಾರೆ.
ಜನವರಿ 14 ರಂದು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದಘಿ. ವೀಕ್ಷಣೆಗೆ ತೆರಳಿದ್ದ ಅದೇ ಗ್ರಾಮದ ರಂಗನಾಥ(24) ಹೋರಿಯೊಂದು ತಿವಿದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಶಿಕಾರಿಪುರ ಆಸ್ಪತ್ರೆ ಹಾಗೂ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತುಘಿ. ಚಿಕಿತ್ಸೆಲಿಸದೇ ಮೃತಪಟ್ಟಿದ್ದಾರೆ.
ತಾಲೂಕಿನ ಕೊನಗವಳ್ಳಿಯಲ್ಲಿ ಜನವರಿ 15 ರಂದು ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತುಘಿ. ನಗರದ ಆಲ್ಕೊಳ ನಿವಾಸಿ, ಆಟೋ ಚಾಲಕ ಲೋಕೇಶ್(32) ವೀಕ್ಷಣೆಗೆ ತೆರಳಿದ್ದರು. ಅಲ್ಲಿ ಹೋರಿ ಮೈಮೇಲೆ ಹಾರಿ ಗಾಯಗೊಂಡಿದ್ದರು. ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.