ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡುತ್ತಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.
ಮಂಡ್ಯದ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜಿಸಲಾಗಿದ್ದು, ಮಂಡ್ಯ ವಿವಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ಕೇಂದ್ರ ಸಚಿವ ಅಮಿತ್ ಶಾ ಅವರಿಗೆ + ಭದ್ರತೆ ಇರುವ ಕಾರಣ ವಿವಿಗೆ ಇಂದು ಮತ್ತೆ ನಾಳೆ ರಜೆ ನೀಡಲಾಗಿದೆ. ಡಿಸಿ ಡಾ. ಗೋಪಾಲಸ್ವಾಮಿ ರಜೆ ಆದೇಶ ನೀಡಿದ್ದಾರೆ. ಡಿ.30, 31ರಂದು ಸಮಾವೇಶ ನಡೆಯಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗಾಗಿ ಶಾ ಪಣ ತೊಟ್ಟಿದ್ದಾರೆ.