ಕೇಂದ್ರ ಸಚಿವ ಖೂಬಾ ಅವರ ವಾಹನದ ಮೇಲೆ ಕಲ್ಲು ತೂರಾಟ

ಹೊಸದಿಗಂತ ವರದಿ, ಕಲಬುರಗಿ (ಆಳಂದ):

ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿರುವ ರಾಘವ ಚೈತನ,ರ ಶಿವಲಿಂಗಕ್ಕೆ ಪೂಜೆ ಮಾಡಿ ಹೊರ ಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ, ಪೋಲಿಸರಹಾಗೂ ಮಾದ್ಯಮದವರ ಮೇಲೆ ಅಲ್ಪಸಂಖ್ಯಾತ ಕೋಮಿನ ಸಮುದಾಯವು ಕಲ್ಲೂ ತೂರಾಟ ಮಾಡಿದ ಘಟನೆ ನಡೆದಿದೆ.

ಜಿಲ್ಲಾಡಳಿತದ ನಿದೇ೯ಶನದಂತೆ ಶಿವಲಿಂಗ ಪೂಜೆ ಸಲ್ಲಿಸಲು 10 ಜನರಿಗೆ ಅವಕಾಶ ನೀಡಲಾಗಿತ್ತು. ಹಾಗೇ ಪೂಜೆ ಸಲ್ಲಿಸಲೆಂದೆ ಕೇಂದ್ರ ಸಚಿವ ಭಗವಂತ ಖೂಬಾ,ಶಾಸಕ ರಾಜಕುಮಾರ್ ಪಾಟೀಲ್, ಬಸವರಾಜ ಮತ್ತಿಮಡು, ಕಡಗಂಚಿ ಮಠದ ವೀರಭದ್ರ ಸ್ವಾಮೀಜಿ ಸೇರಿದಂತೆ ಹತ್ತು ಜನರ ತಂಡವು ದಗಾ೯ ಪ್ರವೇಶ ಮಾಡಿತ್ತು. ಪೂಜೆ ಸಲ್ಲಿಸಿ ಹೊರ ಬರುತ್ತಿರುವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಜನರು ಕಲ್ಲೂ ತುರಾಟ ಮಾಡಿದ್ದಾರೆ.

ಕೇಂದ್ರ ಸಚಿವರ ಕಾರಿನ ಮೇಲೆ, ಪೋಲಿಸರ ಮೇಲೆ ,ಮಾದ್ಯಮದರ ಮೇಲೆ ಕಲ್ಲೂ ತುರಾಟವಾಗಿದ್ದು, ವಿದ್ಯುನ್ಮಾನ ಮಾದ್ಯಮದ ಹಲವರಿಗೆ ಗಾಯಗಳಾಗಿವೆ.

ಪರಿಸ್ಥಿತಿ ತಿಳಿಗೊಳಿಸಲು ಪೋಲಿಸರು ಹರಸಾಹಸ ಪಟ್ಟರು, ಅನ್ಯ ಕೋಮಿನ ಜನರು ಕಲ್ಲೂಗಳಿಂದ,ಬಡಿಗೆಳಿಂದ ವಾಹನಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಇನ್ನೂ ಸಚಿವರ ಕಾರು ಸೇರಿದಂತೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ ಅವರ ವಾಹನದ ಮೇಲೂ ಕಲ್ಲು ತೂರಾಟವಾಗಿದ್ದು, ಹಿಂಬದಿಯ ಸೈಡ್ ಗಾಜು ಪುಡಿಯಾಗಿ ಹೋಗಿದೆ.

ತಾಲೂಕಿನಾದ್ಯಂತ 144 ನಿಷೇಧಾಜ್ಞೆ ಜಾರಿ ಮಾಡಿದ್ದು, ಉದ್ರಿಕ್ತ ಪರಿಸ್ಥಿತಿ ಮುಂದುವರೆದಿದೆ.

ಇನ್ನೂ ಕಲ್ಲೂ ತೂರಾಟದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಶಿವರಾತ್ರಿ ದಿನದಂದು ವಿಶೇಷ ಪೂಜೆ ಮಾಡಲು ಬಂದಂತಹ ಸಂದರ್ಭದಲ್ಲಿ ಮಾನಸಿಕ ಸಂತುಲವನ್ನು ಕಳೆದುಕೊಂಡ ಅನ್ಯಧಮಿ೯ಯರು ಕಲ್ಲು ತೂರಾಟ ಮಾಡಿದ್ದು,ಖಂಡನೀಯವಾಗಿದೆ ಎಂದರು.

ಸಹೋದರತೆ,ಸಹಬಾಳ್ವೆಯಿಂದ ಇರುವ ಮನಸ್ಸು ಆ ಧಮಿ೯ಯರಿಗೆ ಇಲ್ಲವಾಗಿದೆ. ಇಡೀ ದೇಶವೇ ಆ ಸಮುದಾಯದ ವತ೯ನೆಯನ್ನು ನೋಡುತ್ತಿದ್ದು,ಇದು ಒಳ್ಳೆಯ ಸಂಗತಿ ಅಲ್ಲ ಎಂದರು.ಕಲ್ಲೂ ತೂರಾಟ ನಡೆಸಿದ ಕಿಡಿಗೇಡಿಗಳನು ಸುಮ್ಮನೆ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.

ಅದೇ ರೀತಿ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಮಾತನಾಡಿ, ಶಾಂತಿಯುತವಾಗಿ ಜಿಲ್ಲಾಡಳಿತ ಶಿವಲಿಂಗ ಪೂಜೆ ಮಾಡಲು ಅನುಮತಿ ನೀಡಿತ್ತು,ಆದರೆ ಮುಸ್ಲಿಂ ಸಮುದಾಯದ ಜನರು ಇದನ್ನು ಸಹಿಸದೆ ನಮ್ಮ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಉದ್ವೀಗ್ನ ಸ್ಥಿತಿಗೆ ಕಾರಣರಾದವರನ್ನು 48 ಗಂಟೆಗಳಲ್ಲಿ ಹಿಡಿದು ಒಳಗೆ ಹಾಕಬೇಕು ಎಂದರು.

ಮುಂಬರುವ ದಿನಗಳಲ್ಲಿ ನಿರಂತರವಾಗಿ ಈ ಶಿವಲಿಂಗಕ್ಕೆ ಪೂಜೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕು. ಹಾಗೇ ಸಾವ೯ಜನಿಕರು ಭಯಬೀತರಾಗದೇ ಇಲ್ಲಿ ಬಂದು ಪೂಜೆಯನ್ನು ಮಾಡಬೇಕು ಎಂದ ಅವರು,ಇದಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಯನು ಮಾಡಿಕೊಡಬೇಕೆಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!