ದಾಖಲೆ‌ ಇಲ್ಲದ ಬೆಳ್ಳಿ ಸಾಗಾಟ: ಇಬ್ಬರ ಬಂಧನ

ಹೊಸದಿಗಂತ ವರದಿ, ಭಟ್ಕಳ:

ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಾಹನ ಸಮೇತ ಭಟ್ಕಳ ಶಹರ ಠಾಣೆ ಪೊಲೀಸರು ಭಟ್ಕಳ ಪುರವರ್ಗ ಚೆಕ್ ಪೋಸ್ಟನಲ್ಲಿ ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ತಾಲೂಕಿನ ಇಂದ್ರಳ್ಳಿ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಉಮೇಶ ಜನಾರ್ಧನ ಆಚಾರ್ಯ ಹಾಗೂ ಉಡುಪಿಯ ಅಂಬಾಬಾಗಿಲು ಕುಕ್ಕಂಜೆ ನಿವಾಸಿ ರವಿ ಶೀನಾ ಆಚಾರ್ಯ ಬಂಧಿತರು.

ಇವರು ಉಡುಪಿಯಿಂದ ಹೊನ್ನಾವರದ ಕಡೆಗೆ 7.5ಲಕ್ಷ ಮೌಲ್ಯದ 10 ಕೆಜಿ 820 ಗ್ರಾಂ ತೂಕದ ಬೆಳ್ಳಿಯನ್ನು ದಾಖಲೆ ಇಲ್ಲದೇ ಸಾಗಿಸುತ್ತಿದ್ದರು. ಪುರವರ್ಗ ಚೆಕ್‌ಪೋಸ್ಟನಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಸಂಶಯಾಸ್ಪದವಾಗಿ ಸಿಕ್ಕಿದ್ದರಿಂದ ಭಟ್ಕಳ ಶಹರ ಪೊಲೀಸರು ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಶಹರ ಠಾಣೆಯ ಪಿ.ಎಸ್.ಐ ಯೋಗೇಶ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!