ಸ್ವಾತಂತ್ರ್ಯ ಹೋರಾಟಕ್ಕೆ ಜೀವನ ಮುಡಿಪಾಗಿಟ್ಟಿದ್ದ ಗೋಪಾಲ ಮೆನನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಗೋಪಾಲ ಮೆನನ್ ಅವರು ಜುಲೈ 1, 1883 ರಂದು ಕ್ಯಾಲಿಕಟ್ ಬಳಿಯ ತಿರುವನ್ನೂರಿನಲ್ಲಿ ಜನಿಸಿದರು. ಅವರು ವೃತ್ತಿಯಲ್ಲಿ ವಕೀಲರಾಗಿದ್ದರು ಆದರೆ 1921 ರಲ್ಲಿ ಅಸಹಕಾರ ಚಳವಳಿಗೆ ಸೇರುವ ಉದ್ದೇಶದಿಂದ ಕೆಲಸವನ್ನು ತೊರೆದರು. ಆ ಬಳಿಕ ಕಾನೂನು ಅಭ್ಯಾಸವನ್ನು ನಿಲ್ಲಿಸಿದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಖಿಲಾಫತ್ ನಾಯಕ ಯಾಕೂಬ್ ಹುಸ್ಸಾನ್ ಮಲಬಾರ್‌ ಪ್ರದೇಶಕ್ಕೆ ಭೇಟಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ ಅವರನ್ನು 1921 ರಲ್ಲಿ ಬಂಧಿಸಿ ಆರು ತಿಂಗಳ ಕಾಲ ಕಣ್ಣೂರು ಜೈಲಿನಲ್ಲಿಡಲಾಗಿತ್ತು. ಆ ಬಳಿಕ1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ಮತ್ತೆ ಒಂದು ವರ್ಷ ಜೈಲುವಾಸ ಅನುಭವಿಸಿದರು.
1931 ರಲ್ಲಿ ಕಾಂಗ್ರೆಸ್ ಸಮಿತಿಯಲ್ಲಿ ಅವರು ಎಲ್ಲಾ ಹಿಂದೂಗಳಿಗೆ ಗುರುವಾಯೂರ್ ದೇವಾಲಯಕ್ಕೆ ಪ್ರವೇಶ ಕಲ್ಪಿಸುವ ಕುರಿತಾಗಿ ನಿರ್ಣಯವನ್ನು ಮಂಡಿಸಿದರು. 1934 ರಲ್ಲಿ ಗೋಪಾಲ ಮೆನನ್ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. 30 ಜೂನ್ 1964 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!