ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ ಅವರ ತಂದೆ ಆಂಜಿನಪ್ಪ (85) ಅವರು ಇಂದು ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರತಿ ಬಸವರಾಜ ಅವರ ತಂದೆ ಆಂಜಿನಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಮೃತ ಆಂಜಿನಪ್ಪ ಅವರಿಗೆ ಸಚಿವ ಬಿಎ ಬಸವರಾಜ ಸೇರಿದಂತೆ ಐವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ಭೈರತಿ ಬಸವರಾಜ್ ಅವರು ದೊಡ್ಡಮಗನಾಗಿದ್ದಾರೆ.
ಇಂದು ಮೃತರಾದಂತ ಸಚಿವ ಬಿ ಎ ಬಸವರಾಜ್ ಅವರ ತಂದೆ ಆಂಜಿನಪ್ಪ ಅವರ ಅಂತ್ಯಕ್ರಿಯೆಯನ್ನು ಸಚಿವರ ಸ್ವಗ್ರಾಮ ಭೈರತಿಯಲ್ಲಿ ಸಂಜೆ 6 ಗಂಟೆಗೆ ನೆರವೇರಲಿದೆ.