ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಉತ್ತರ ಪ್ರದೇಶ ವಿಧಾನಸಭೆಯ 5ನೇ ಹಂತದ ಮತದಾನ ನಡೆಯುತ್ತಿದೆ.
ಸಮಾಜವಾದಿ ಪಕ್ಷದಿಂದ ನಾಯಕ ಪವನ್ ಪಾಂಡೇ ಕಣಕ್ಕಿಳಿದಿದ್ದು, ಬಿಜೆಪಿಯಿಂದ ವೇದ ಪ್ರಕಾಶ ಗುಪ್ತಾ ಚುನಾವಣಾ ಸಮರದಲ್ಲಿದ್ದಾರೆ. ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರಾತು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ರಾಮ ಜನ್ಮ ಭೂಮಿ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಒಟ್ಟು 12 ಜಿಲ್ಲೆಗಳಲ್ಲಿ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ 692 ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲಿದೆ.
ಸುಲ್ತಾನ್ ಪುರ್, ಚಿತ್ರಕೂಟ್, ಪ್ರತಾಪ್ ಗಢ, ಕೌಶಂಬಿ, ಪ್ರಯಾಗ್ ರಾಜ್. ಬಾರಾಬಂಕಿ, ಬಹ್ರೈಚ್, ಶ್ರಾವಸ್ತಿ ಹಾಗೂ ಗೊಂಡಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. 2.24 ಕೋಟಿ ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.