ಬಿಸಿಲ ಬೇಗೆಯನ್ನು ನೀಗಿಸಿದ ವರುಣ: ರಾಯಚೂರಿನಲ್ಲಿ ಗುಡುಗು ಸಹಿತ ಗಾಳಿ ಮಳೆ

ಹೊಸದಿಗಂತ ವರದಿ, ರಾಯಚೂರು :

ಜಿಲ್ಲೆಯ ಹಲವೆಡೆ ಭಾರಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಆಗುವ ಮೂಲಕ ಬಿಸಿಲಿಗೆ ಕಾದು ಕೆಂಡದoತಾಗಿದ್ದ ಇಳೆ ತಂಪಾಗುವoತೆ ಮಾಡಿತು.

ಇಂದು ಮಧ್ಯಾಹ್ನದಿಂದಲೇ ಅಧಿಕ ಶೆಖೆ ಕಂಡು ಬಂದಿತ್ತು. ೩.೨೦ ಸಮಯಕ್ಕೆ ಬಲವದ ಗಾಳಿ ಬೀಸಲಾರಂಭಿಸಿತು. ನಗರದಲ್ಲಿ ಎಲ್ಲೆಂದರಲ್ಲಿ ಬೀಸಾಕಿದ್ದ ಪ್ಲಾಸ್ಟಿಕ್ ಹಾಳೆಗಳು ಗಾಳಿಯಲ್ಲಿ ಹಾರಾಡಿ ಸಾರ್ವಜನಿಕರಿಗೆ ಇನ್ನಿಲ್ಲದಂತೆ ಕಿರಿಕಿರಿಯನ್ನುಂಟು ಮಾಡಿದ್ದು ಕಂಡುಬoದಿತು.

ಸ್ವಲ್ಪ ಸಮಯದಲ್ಲಿ ಮಳೆ ಆರಂಭವಾಗಿದ್ದರಿoದ ಧೂಳು ಕಡಿಮೆಯಾಯಿತು. ಇಂದು ಆದ ಸಾಧಾರಣ ಮಳೆ ಭೂಮಿ ಹಾಗೂ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಗುವoತೆ ಮಾಡಿದ್ದು ಸಾರ್ವಜನಿಕರು ಒಂದೆರಡು ದಿನಗಳ ಮಟ್ಟಿಗಾದರೂ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತೆ ಮಾಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!