ಸಿಲಿಕಾನ್​ ಸಿಟಿಯಲ್ಲಿ ವರುಣನ ಆಗಮನ: ಬಿಸಿಲಿನಿಂದ ಕಂಗೆಟ್ಟಿದ್ದ ಮಹಾನಗರ ಕೂಲ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಸಿಲಿಕಾನ್​ ಸಿಟಿಯ ಕೆಲವೆಡೆ ವರುಣನ ಆಗಮನವಾಗಿದೆ. ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆ(Rain)ಯಾಗಿದೆ. ಇದರಿಂದ ಮಹಾನಗರ ಕೊಂಚ ಮಟ್ಟಿಗೆ ಕೂಲ್​ ಆಗಿದೆ. ಇನ್ನು ನಗರದ ಫ್ರೇಜರ್ ಟೌನ್​, ರಿಚ್ಮಂಡ್ ಟೌನ್​ ಸೇರಿದಂತೆ ಹಲವೆಡೆ ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಇನ್ನು ರಾಜ್ಯದಲ್ಲಿ ಕೆಲವು ದಿನಗಳ ಕಾಲ ಬಿಸಿಗಾಳಿಯು ಮುಂದುವರೆಯಲಿದ್ದು, ಈ ಮಧ್ಯೆ ಏ.30 ರಿಂದ ಮೇ.03 ರ ನಡುವೆ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿತ್ತು.

ಇಂದು(ಮೇ.02) ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್ ಸುತ್ತಮುತ್ತ ತುಂತುರು ಮಳೆ ಆರಂಭವಾಗಿದೆ. ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದ್ದು, ಸಂಜೆಯಾಗ್ತಿದ್ದಂತೆ ಮೋಡ ದಟ್ಟವಾಗುತ್ತಿದೆ. ಈ ಹಿನ್ನಲೆ ರಾತ್ರಿ ವೇಳೆಗೆ ಜೋರು ಮಳೆ ಬರುವ ಸಾಧ್ಯತೆಯಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ‌ ಮಳೆಯ ಸಿಂಚನವಾಗಿದೆ. ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ವಾತಾವರಣ ತಣ್ಣಗಾಗಿದೆ. ಕಳೆದೊಂದು ವರ್ಷದಿಂದ ಮಳೆ ಕಾಣದೆ ಬರಡಾಗಿ ಹೋಗಿದ್ದ ಭೂಮಿ, ಇದ್ದಕ್ಕಿದ್ದಂತೆ ಸುರಿದ ಮಳೆ‌‌ ಹನಿಗೆ ತಂಪಾಗಿದೆ. ಮಳೆ‌ ಹನಿ ಕಂಡು ಕೆಜಿಎಫ್ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!