August 17, 2026
Monday, August 17, 2026
spot_img

ಕೊಟ್ಟಾಯಂನಲ್ಲಿ ವರುಣನ ರೌದ್ರನರ್ತನ: ಪಾಲಾ ಪಟ್ಟಣ ಮುಳುಗಡೆ, ಜನ ಜೀವನ ಅಸ್ತವ್ಯಸ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೀನಚಿಲ್ ಹಾಗೂ ಲಾಲಂ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಪಾಲಾ ಪಟ್ಟಣವು ನೀರುಪಾಲಾಗಿದ್ದು, ನೂರಾರು ವಸತಿ ಗೃಹಗಳು ಮತ್ತು ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗಿದೆ. ಈ ಹಠಾತ್ ವಿಕೋಪವು ಜನರಲ್ಲಿ 2018ರ ಪ್ರವಾಹದ ಕಟು ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಸಂಪರ್ಕ ಕಡಿತ ಮತ್ತು ಅಪಾರ ಹಾನಿ

ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿದುಹೋಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿವೆ. ಜನರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ತಡರಾತ್ರಿಯವರೆಗೆ ನಿರಂತರವಾಗಿ ಮಳೆ ಸುರಿದಿದೆ.

ಭೂಕುಸಿತ ಮತ್ತು ತೀವ್ರ ಮುನ್ನೆಚ್ಚರಿಕೆ

ಪೂಂಜಾರ್ ಭಾಗದಲ್ಲಿ ಸಂಭವಿಸಿದ ಭಾರೀ ಭೂಕುಸಿತವು ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿತು. ಶನಿವಾರ ಮುಂಜಾನೆ 4 ಗಂಟೆಗೆ ನದಿಗಳಲ್ಲಿ ನೀರಿನ ಮಟ್ಟ ಏರತೊಡಗಿತು. ಗಂಭೀರತೆಯನ್ನು ಮನಗಂಡ ಪಾಲಾ ಪುರಸಭೆಯು ಮುಂಜಾನೆ 5:30ಕ್ಕೆ ಸತತ ಮೂರು ಬಾರಿ ಸೈರನ್ ಮೊಳಗಿಸಿ, ಸಾರ್ವಜನಿಕರಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !