ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾಚೀನ ಕಾಲದಿಂದಲೂ ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಹೆಚ್ಚಿನ ಜನರು ವಾಸ್ತು ನಿಯಮಗಳ ಪ್ರಕಾರ ತಮ್ಮ ಜೀವನ ಮಾರ್ಗವನ್ನು ನಿರ್ಮಿಸುತ್ತಾರೆ. ವಾಸ್ತು ಶಾಸ್ತ್ರವು ಜೀವನದ ನಕಾರಾತ್ಮಕ ಅಂಶಗಳನ್ನು ಕರಗಿಸುತ್ತದೆ ಮತ್ತು ನಿವಾರಿಸುತ್ತದೆ. ವಾಸ್ತುವು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣಗಳನ್ನು ವಿವರಿಸುತ್ತದೆ ಮತ್ತು ಮನೆಗಳಲ್ಲಿನ ನಕಾರಾತ್ಮಕ ಅಂಶಗಳೇ ಜೀವನದ ವೈಫಲ್ಯಕ್ಕೆ ಕಾರಣ ಎಂದು ನಮಗೆ ತಿಳಿಸುತ್ತದೆ.
ನಿಮ್ಮ ಜೀವನದಲ್ಲಿ ಒಂದರ ನಂತರ ಒಂದರಂತೆ ಹಲವಾರು ಸಮಸ್ಯೆಗಳು ಉದ್ಭವಿಸಿದರೆ, ಮನೆಯಲ್ಲಿ ಏನಾದರೂ ದೋಷವಿದೆ ಎಂದು ವಾಸ್ತು ಹೇಳುತ್ತದೆ. ಮನೆಯಲ್ಲಿರುವ ಕೆಲವು ನಕಾರಾತ್ಮಕ ಅಂಶಗಳು ನಿಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ವಾಸ್ತು ಹೇಳುತ್ತದೆ. ವಾಸ್ತು ಹೇಳುವ ಅನನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ದೇವರ ವಿಗ್ರಹಗಳನ್ನು ಇರಿಸುವಾಗ ಎದುರು ಬದುರಾಗಿ ಇರಿಸಬಾರದು ಎಂದು ವಾಸ್ತು ತಿಳಿಸುತ್ತದೆ. ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನಿರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ವಾಸ್ತು ಹೇಳುತ್ತದೆ.
ವಿಗ್ರಹಗಳು ಒಂದಕ್ಕೊಂದು ಪರಸ್ಪರ ಎದುರು ಬದುರಾಗಿದ್ದರೆ ಋಣಾತ್ಮಕ ಶಕ್ತಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ವಾಸ್ತು ಹೇಳುತ್ತದೆ. ಇದು ವ್ಯಕ್ತಿಯ ಪ್ರಗತಿಗೆ ಅಡ್ಡಿಯನ್ನುಂಟು ಮಾಡಿ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ವಾಸ್ತು ತಿಳಿಸುತ್ತದೆ.
ಕೊಳೆಯಾದ ಬಟ್ಟೆಗಳನ್ನು ಮನೆಯಲ್ಲಿರಿಸಿಕೊಳ್ಳುವುದು
ಮನೆಯಲ್ಲಿ ಕೊಳೆಬಟ್ಟೆಗಳನ್ನು ಇರಿಸುವುದು ಋಣಾತ್ಮಕತೆಯನ್ನುಂಟು ಮಾಡುತ್ತದೆ ಎಂದು ವಾಸ್ತು ಹೇಳುತ್ತದೆ. ಕೊಳೆ ಬಟ್ಟೆಗಳು ವ್ಯಕ್ತಿಯ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತದೆ ಅಂತೆಯೇ ಅವರ ಅಭಿವೃದ್ಧಿ ಪಥಕ್ಕೆ ತಡೆಯನ್ನೊಡ್ಡುತ್ತದೆ ಎಂದು ವಾಸ್ತು ತಿಳಿಸುತ್ತದೆ. ಮನೆಯಲ್ಲಿ ಕೊಳೆ ಬಟ್ಟೆಗಳನ್ನು ಇರಿಸುವುದು ಋಣಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಹೇಳುತ್ತದೆ.
ಮನೆಯಲ್ಲಿ ಕಸ ಹಾಗೂ ಕೊಳಕು ಇರುವುದು
ಮನೆ ಕೊಳಕಾಗಿದ್ದರೆ ಹಾಗೂ ಕಸ ಸಂಗ್ರಹಣೆ ಆಗಿದ್ದರೆ ಅದು ಕೂಡ ಋಣಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಹೇಳುತ್ತದೆ. ಇದು ವ್ಯಕ್ತಿಯ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತದೆ ವಾಸ್ತು ಸೂಚಿಸಿದೆ.
ಅಹಿತಕರ ಭಾವನೆಗಳು
ನಮ್ಮ ಮನಸ್ಸು ಧನಾತ್ಮಕ ಚಿಂತನೆಗಳಿಂದಲೇ ತುಂಬಿರಬೇಕು ಎಂದು ವಾಸ್ತು ಹೇಳುತ್ತದೆ. ನಾವು ಅಹಿತಕರ ಯೋಚನೆ ಹಾಗೂ ಭಾವನೆಗಳನ್ನು ಹೊಂದಿದ್ದರೆ ಅದು ಕೂಡ ಪ್ರಗತಿಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ವಾಸ್ತು ಹೇಳಿದೆ. ಹಾಗಾಗಿ ನಾವು ಧನಾತ್ಮಕವಾಗಿ ಯೋಚಿಸಬೇಕು ಎಂದು ವಾಸ್ತು ಸಲಹೆ ನೀಡುತ್ತದೆ.