ಮಲಗಿದ್ದವರ ಮೇಲೆ ಹರಿದ ವಾಹನ: ಓರ್ವ ಸಾವು

ಹೊಸದಿಗಂತ ವರದಿ, ಕೊಪ್ಪಳ:

ಶನಿವಾರ ರಾತ್ರಿ ಭಾನಾಪುರ ಬಳಿ ಜರುಗಿದ ಭೀಕರ ಅಪಘಾತ ಮರೆಯುವ ಮುನ್ನ ಭಾನುವಾರ ರಾತ್ರಿ ಹುಲಿಗಿ ಗ್ರಾಮದ ನಂದಿ ಸರ್ಕಲ್ ನಲ್ಲಿ ಮಲಗಿದ್ದವರ ಮೇಲೆ ಟೆಂಪೋ (ಗೂಡ್ಸ್) ಹೋಗಿದೆ. ಪರಿಣಾಮ‌ ಓರವ ಮೃಯಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಈ ಭೀಕರ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದ್ದು ಒಂದು ಕ್ಷಣ ಗಾಬರಿಯಾಗುತ್ತೆ. ಮಲಗಿದ್ದವರ ಪೈಕಿ ತಿಪ್ಪಣ್ಣ ಎಂಬ ವೃದ್ದ (74) ಸಾವಿಗೀಡಾಗಿದ್ದು, ಮೂವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕಾರಟಗಿಯ ತುಕಾರಾಂ, ಬಳ್ಳಾರಿಯ ಮಲ್ಲಮ್ಮ , ಕುಕನೂರಿನ ಹನುಮಮ್ಮ ಎಂದು ತಿಳಿದು ಬಂದಿದೆ.
ಮಲಗಿದ್ದವರ ಮೇಲೆ ಟೆಂಪೋ ಹರಿಸಿರುವ ಚಾಲಕನ ವಿವರ ತಿಳಿದು ಬಂದಿದ್ದು ಬಳ್ಳಾರಿ ಬಳಿಯ ಶ್ರೀನಿವಾಸ ಎನ್ನಲಾಗಿದೆ. ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!