ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ವಿಧಿವಶರಾಗಿದ್ದಾರೆ.
ಈ ನಡುವೆ ಅವರ ಪಾರ್ಥೀವ ಶರೀರರವನ್ನು ತುಮಕೂರಿನ ನಾಗವಲ್ಲಿ ಬಳಿ ಇರುವ ತೊಂಡಗೆರೆ ಗ್ರಾಮದಲ್ಲಿ ನಾಳೆ ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ಅವರ ಪುತ್ರ, ನಟ ಶರತ್ ಲೋಹಿತಾಶ್ವ ಮಾಹಿತಿ ನೀಡಿದ್ದಾರೆ.
ಇನ್ನೂ ಇದಕ್ಕೂ ಮುನ್ನ ಇಂದು ಕುಮಾರಸ್ವಾಮಿ ಲೇಔಟ್ನಲ್ಲಿ ಇರುವ ಲೋಹಿತಾಶ್ವ ಅವರ ಮನೆಯಲ್ಲಿ ಅವರ ಅಂತಿಮ ದರ್ಶನವನ್ನು ಏರ್ಪಡಿಸಲಾಗಿದೆ ಅಂತ ತಿಳಿಸಿದ್ದಾರೆ