ಹೊಸದಿಗಂತ ವರದಿ, ವಿಜಯನಗರ(ಹೊಸಪೇಟೆ):
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಸಾವಿರಾರು ಜನರೊಂದಿಗೆ ಎತ್ತಿನ ಬಂಡಿ ಮೂಲಕ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಗಮನಸೆಳೆದರು.
ನಗರದ ಡಾ.ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಮೆರವಣಿಗೆ ಎಸಿ ಕಚೇರಿ ಬಳಿವರೆಗೂ ಬೃಹತ್ ಮೆರವಣಿಗೆ ನಡೆಸುವ ಮೂಲಕ ಯುವ ನಾಯಕ ಸಿದ್ದಾರ್ಥ್ ಸಿಂಗ್ ಶಕ್ತಿ ಪ್ರದರ್ಶನ ನಡೆಸಿದರು.
ದಾರಿಯುದ್ದಕ್ಕೂ ಜನಸಾಗರವೇ ನೆರೆದಿತ್ತು, ಎಲ್ಲ ಕಡೆಗಳಲ್ಲೂ ಕಮಲ ಬಾವುಟಗಳು ರಾರಾಜಿಸಿದವು.
ಎತ್ತಿನ ಬಂಡಿಯನ್ನು ನಿಂತು ಜನರ ಕಡೆ ಕೈಎತ್ತಿ ನಮಸ್ಕರಿಸುವ ಮೂಲಕ ಗಮನಸೆಳೆದರು. ನಂತರ ಸಂಡೂರು ರಸ್ತೆಯ ಎಸಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ತಂದೆ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸೇರಿದಂತೆ ಪಕ್ಷದ ಗಣ್ಯರು ಸಾಥ್ ನೀಡಿದರು. ಪಕ್ಷದ ಅನೇಕ ಗಣ್ಯರು, ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಸೇರಿದಂತೆ ಜನಸ್ತೋಮವೇ ನೆರೆದಿತ್ತು.