ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಬಿಷ್ಣುಪುರದಲ್ಲಿ ಗುಂಡಿನ ಸದ್ದು ಕೇಳಿಸಿದೆ.
ಬಿಷ್ಣುಪುರದ ಕುಂಬಿ ಮತ್ತು ತೌಬಲ್ ಜಿಲ್ಲೆಯ ನಡುವೆ ಗುಂಡಿನ ದಾಳಿ ನಡೆದಿದ್ದು, ಅದೇ ಪ್ರದೇಶದಲ್ಲಿ ಶುಂಠಿ ಕೊಯ್ಲು ಮಾಡುತ್ತಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ.
ಆರು ಸುತ್ತಿನ ಮಾರ್ಟರ್ ಫೈರಿಂಗ್ ನಂತರ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಮಣಿಪುರ ಜನರಿಗೆ ನೆಮ್ಮದಿ ಎನ್ನೋದು ಕೈಗೆ ಸಿಗಲಾರದ ತುತ್ತಾಗಿದೆ. ನಾಪತ್ತೆಯಾದವರಿಗಾಗಿ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ.
ಓಯಿನಮ್ ರೋಮೆನ್ ಮೈತಿ, ಅಹಾಂತೇಮ್ ಧಾರಾ ಮೈತಿ, ತೌಡಮ್ ಇಬೊಮ್ಚಾ ಮೈತಿ ಹಾಗೂ ತೌದಮ್ ಆನಂದ್ ಮೈತಿ ಕಾಣೆಯಾಗಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.