ದೆಹಲಿ ತಂಡಕ್ಕೆ ಸೆಹ್ವಾಗ್‌ ಪುತ್ರ ಆರ್ಯವೀರ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟೀಂ ಇಂಡಿಯಾದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಸ್ಫೋಟಕ ಆಟಕ್ಕೆ ಮಾರು ಹೋಗದಿರುವವರಿಲ್ಲ. ಕ್ರೀಸ್‌ನಲ್ಲಿ ಸೆಹ್ವಾಗ್ ಉಪಸ್ಥಿತಿಯಿದ್ದರೆ ಬೌಲರ್‌ ಗಳು ಬೆದರುತ್ತಿದ್ದರು. ಸೆಹ್ವಾಗ್‌ ಕ್ರಿಕೆಟ್‌ ತೊರೆದ ಮೇಲೆ ಕಾಮೆಂಟ್ರಿಯೇಟರ್ ಆಗಿ ಹೆಸರು ಮಾಡುತ್ತಿದ್ದಾರೆ. ಇದೀಗ ಸೆಹ್ವಾಗ್ ಪುತ್ರ ಆರ್ಯವೀರ್ ಕ್ರಿಕೆಟ್‌ ಅಂಗಳದಲ್ಲಿ ಸದ್ದು ಮಾಡಲು ಸಿದ್ಧನಾಗಿದ್ದಾನೆ. ಇದಕ್ಕೆ ಮೊದಲ ಹೆಜ್ಜೆಯಾಗಿ U16 ವಿಜಯ್ ಮರ್ಚೆಂಟ್ ಟ್ರೋಫಿಯ ದೆಹಲಿ ತಂಡಕ್ಕೆ ಆರ್ಯವೀರ್ ಆಯ್ಕೆಯಾಗಿದ್ದಾನೆ.
15 ವರ್ಷದ ಆರ್ಯವೀರ್ ತಂದೆಯ ಹೆಸರನ್ನು ಉಳಿಸುವ ನಿರೀಕ್ಷೆ ಮೂಡಿಸಿದ್ದಾನೆ. ಬಲಗೈ ಬ್ಯಾಟ್ಸ್‌ಮನ್ ಆರ್ಯವೀರ್ ತಂದೆಯಂತೆಯೇ ದಿಟ್ಟ, ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯನ್ನು ಹೊಂದಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದು. ಈಗ ವಿಜಯ್ ಮರ್ಚೆಂಟ್ ಟ್ರೋಫಿ ಟೂರ್ನಿಗೆ ದಿಲ್ಲಿ ತಂಡದಲ್ಲಿ ಸೇರ್ಪಡೆಗೊಳ್ಳುವುದರೊಂದಿಗೆ ವೃತ್ತಿಪರ ಕ್ರಿಕೆಟ್‌ಗೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!