ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ರಾಮನಿಗೆ ಜಲಾಭಿಷೇಕ ಮಾಡಲು 155 ರಾಷ್ಟ್ರಗಳ ನದಿಗಳ ನೀರನ್ನು ತರಿಸಲಾಗಿದೆ. ಉಜ್ಬೇಕಿಸ್ತಾನ್, ಪಾಕಿಸ್ತಾನ್, ಚೀನಾ ಹಾಗೂ ಇನ್ನಿತರ 155 ದೇಶಗಳ ನೀರು ಅಯೋಧ್ಯೆ ತಲುಪಿದೆ.
ನಾಳೆ ಈ ನದಿಗಳ ನೀರಿನಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಶ್ರೀರಾಮನಿಗೆ ಜಲಾಭಿಷೇಕ ಮಾಡಲಿದ್ದಾರೆ.
ಅಂಟಾರ್ಟಿಕಾ, ತಾಂಜಾನಿಯಾ, ನೈಜೀರಿಯಾ, ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್ ಭೂತಾನ್,ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದಿಂದಲೂ ನೀರನ್ನು ತರಿಸಲಾಗಿದ್ದು, ಇದೇ ನೀರಿನಿಂದ ಶ್ರೀರಾಮನಿಗೆ ಅಭಿಷೇಕ ಮಾಡಲಾಗುತ್ತದೆ.
ಬಹುದೇಶಗಳಿಂದ ಬಂದಿರುವ ಈ ನೀರನ್ನು ಗಾಜಿನ ಬಾಟಲಿಗೆ ಹಾಕಿದ್ದು, ಬಾಟಲಿಗಳ ಮೇಲೆ ದೇಶಗಳ ಧ್ವಜ, ಹೆಸರು ಹಾಗೂ ನದಿ ಹೆಸರಿನ ಸ್ಟಿಕರ್ಗಳನ್ನು ಲಗತ್ತಿಸಲಾಗಿದೆ. ಹಲವು ದೇಶದ ರಾಯಭಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.