ಹಣಕ್ಕೆ ಮಣೆ ಹಾಕಿ ಟಿಕೆಟ್ ನೀಡುವ ಸಂಸ್ಕೃತಿ ನಮ್ಮಲ್ಲಿಲ್ಲ: ಸಿ.ಟಿ ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿಯಲ್ಲಿ ದುಡ್ಡು ಕೊಟ್ಟರೇ ಟಿಕೆಟ್ ಸಿಗಲ್ಲ, ಇಲ್ಲಿ ಪಕ್ಷ ನಿಷ್ಟೆ, ಪರಿಶ್ರಮ ಮತ್ತು ಸಾಮಾನ್ಯ ಜನರ ನಡುವೆ ಕೆಲಸ ಮಾಡುವವರಿಗೆ ಆಯ್ಕೆ ಮಾಡುತ್ತದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಅವರು ಶನಿವಾರ ಉಡುಪಿಯಲ್ಲಿ ಪತ್ರಕರ್ತರು ಚೈತ್ರಾ ಕುಂದಾಪುರ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲಿ ದುಡ್ಡು ಕೊಟ್ಟವರಿಗೆ ಟಿಕೆಟ್ ಸಿಗುವುದಾಗಿದ್ದರೇ ಬೈಂದೂರಿನಲ್ಲಿ ಗೋವಿಂದ ಬಾಬು ಪೂಜಾರಿಯವರಿಗೆ ನೀಡಬೇಕಿತ್ತು. ಆದರೆ ಪಕ್ಷ ಕೊಟ್ಟದ್ದು ಗುರುರಾಜ್ ಗಂಟಿಹೊಳೆಯವರಿಗೆ, ಸುಳ್ಯದಲ್ಲಿ ಭಾಗೀರಥಿ ಮರುಳ್ಯಾ ಅವರಿಗೆ ನೀಡಿದ್ದೇವೆ. ಅವರ ಖಾತೆಯಲ್ಲಿ ಕೆಲವು ಸಾವಿರಗಳು ಇರಲಿಲ್ಲ. ದುಡ್ಡಿನ ಮೇಲೆ ನಮ್ಮ ಪಾರ್ಟಿಯಲ್ಲಿ ಟಿಕೆಟ್ ಸಿಗಲ್ಲ, ಹಾಗೆ ಭಾವಿಸುವುದು ತಪ್ಪು, ಹಾಗೆ ಭಾವಿಸುವವರು ಹಣ ನೀಡಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಗೋವಿಂದ ಬಾಬು ಅವರು ಹಾಗೆ ಭಾವಿಸಿದ್ದು ತಪ್ಪು, ಭಾವಿಸಿದ್ದಾರೆ ಎಂದು ಗೊತ್ತಾಗಿ ಮೋಸ ಮಾಡಿದ್ದಾರೆ. ಯಾರು ಮೋಸ ಹೋಗಬೇಡಿ, ಟಿಕೆಟ್ ಮಾರಾಟದ ಸರಕಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!