ಹೊಸದಿಗಂತ ವರದಿ ವಿಜಯನಗರ:
ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾದರೆ ಸುಮ್ಮನಿರುವ ಮಾತೇ ಇಲ್ಲ, ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳಿಗೆ ಅವಕಾಶ ಕೊಡುವುದಿಲ್ಲ, ತಪ್ಪಿತಸ್ಥರು ಯಾರೇ ಇರಲಿ, ಬಂಧಿಸಲಾಗುವುದು.
ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು.
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಮನಿಸಿ, ದಾಂಧಲೇ ಮಾಡುವುದು, ಕಲ್ಲು ತೂರಾಟ ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ, ತಪ್ಪಿತಸ್ಥರು ಯಾರೇ ಇರಲಿ ಸುಮ್ಮನೇ ಬಿಡುವ ಮಾತಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಘಟನೆಯನ್ನು ಕಾನೂನು ಸುವವ್ಯಸ್ಥೆ ಘಟನೆ ಅಂತಾನೇ ಪರಿಗಣಿಸಬೇಕು, ಇದರಲ್ಲಿ ರಾಜಕೀಯ ಬಣ್ಣ ಬೆಳಿಯುವುದು ಬೇಡ ಎಂದರು.