ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹೋದರ ಬಸಂತ್ ಸೋರೆನ್ ನವದೆಹಲಿ ಭೇಟಿಯು ಅವರ ‘ಒಳ ಉಡುಪುಗಳನ್ನು ಖರೀದಿಸಲು ಹೋಗಿದ್ದೆ ಎಂಬ ಹೇಳಿಕೆ ಗದ್ದಲಕ್ಕೆ ಕಾರಣವಾಗಿದೆ. ದುಮ್ಕಾದಲ್ಲಿ ಅವರ ನುಪಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ರೀತಿಯ ಉಡಾಫೆ ಉತ್ತರ ನೀಡಿದ್ದಾರೆ. ” ನನ್ನ ಒಳ ಉಡುಪುಗಳು ಖಾಲಿಯಾಗಿದ್ದವು, ಆದ್ದರಿಂದ ನಾನು ಅವುಗಳನ್ನು ಖರೀದಿಸಲು ದೆಹಲಿಗೆ ಹೋದೆ. ನಾನು ಅಲ್ಲಿಂದಲೇ ಅವುಗಳನ್ನು ಪಡೆಯುವುದು” ಎಂಬ ಮಾತು ಇದೀಗ ವೈರಲ್ ಆಗಿದ್ದು ಜವಾಬ್ದಾರಿಯುತ ನಾಯಕನ ಸ್ಥಾನದಲ್ಲಿರುವವರ ಬಾಯಲ್ಲಿ ಈ ರೀಯಯ ಅಸಡ್ಡೆ ಮಾತುಗಳು ಸೂಕ್ತವಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ.
#WATCH | Dumka: "I had run out of undergarments, so I went to Delhi to purchase them. I get them from there," says JMM MLA and Jharkhand CM Hemant Soren's brother, Basant Soren when asked about his visit to Delhi amid recent political unrest in the state.
(07.09.2022) pic.twitter.com/GBiNWZaLzr
— ANI (@ANI) September 8, 2022
ಹದಿನೈದು ದಿನಗಳಲ್ಲಿ ದುಮ್ಕಾದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಕೊಲೆ ನಡೆದಿದ್ದು, ಬುಧವಾರ ಬಸಂತ್ ಸೊರೇನ್ ದುಃಖತಪ್ತ ಕುಟುಂಬಗಳನ್ನು ಭೇಟಿ ಮಾಡಿದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಈ ರೀತಿಯ ಅಸಂಬದ್ಧ ವ್ಯಾಖ್ಯಾನಗಳನ್ನು ನೀಡಿದರು. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಜಾರ್ಖಂಡ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರ ಸಾವಿಗೆ ಆಡಳಿತವೇ ನೇರ ಹೊಣೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವಂತೆ ಕಾಣುತ್ತಿದೆ. ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಹೇಳಿದರು.