ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಹೆಚ್ಚಿಸಿದೆ. ಇದುವರೆಗೆ ಸರ್ಕಾರದಿಂದ ‘ವೈ’ ಕೆಟಗರಿ ಭದ್ರತೆ ಪಡೆಯಲು ಅರ್ಹರಾಗಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ಝಡ್ ಕೆಟಗರಿ ಭದ್ರತೆ ನೀಡಿದೆ.
ಬಂಗಾಳ ಸರ್ಕಾರವು ಭದ್ರತೆಯನ್ನು ‘Y’ ನಿಂದ ‘Z’ ವರ್ಗಕ್ಕೆ ಏರಿಸಲಾಗಿದೆ. ಆಡಳಿತಾತ್ಮಕ ಮಟ್ಟದಲ್ಲಿ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಗಂಗೂಲಿಗೆ ವಿಐಪಿ ವರ್ಗದ ಭದ್ರತೆ ಸಿಗಲಿದೆ.
ಸಭೆಯ ಬಳಿಕ ಸೌರವ್ ಗಂಗೂಲಿಗೆ ಝಡ್ ಭದ್ರತೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದು, ವರದಿಗಳ ಪ್ರಕಾರ ಸೌರವ್ ಗಂಗೂಲಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಬಂಗಾಳ ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದೆ. ಬಂಗಾಳ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡ ನಂತರ, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಗಂಗೂಲಿ ಅವರ ಮನೆಗೆ 24 ಗಂಟೆಗಳ ಕಾಲ ಭದ್ರತೆಯನ್ನು ನಿಯೋಜಿಸಿದ್ದಾರೆ.