ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಇದಕ್ಕಾಗಿ ಬರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಇದನ್ನು ವಿರೋಧಿಸಿದ್ದಾರೆ.
ನೀತಿ ಸಂಹಿತೆ ಜಾರಿಗೂ, ಬರ ಪರಿಹಾರ ಬಿಡುಗಡೆಗೂ ಏನು ಸಂಬಂಧ? ವಿಳಂಬವಾಗಿದೆ ಎನ್ನೋದನ್ನು ಒಪ್ಪಿಕೊಂಡಿದ್ದಾರೆ ಆದರೆ ಕೊಟ್ಟಿರುವ ಕಾರಣವನ್ನು ನಾವು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ನೀರಿ ಸಂಹಿತೆ ಜಾರಿಯಿಂದ ಕಾರ್ಯಗಳನ್ನು ಮುಗಿಸಲು ಸಮಯ ಬೇಕು ಎಂದಿದ್ದಾರೆ.
ಕೇಂದ್ರದಲ್ಲಿ ಇದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಕರ್ನಾಟಕಕ್ಕೆ ಯಾಕೆ ಬರ ಪರಿಹಾರ ಕೊಟ್ಟಿಲ್ಲ ಎಂದು ಕೇಳಿದರೆ ಒಂದೊಂದು ಕಾರಣ ಹೇಳುತ್ತಾರೆ. ಎಲ್ಲವೂ ಸುಳ್ಳು, ಕೇಂದ್ರದ ಬಣ್ಣ ಬಯಲಾಗಿದೆ. ಸುಳ್ಳು ಹೇಳುವವರಿಗೆ ಯಾರೂ ಮತ ಹಾಕೋದಿಲ್ಲ ಎಂದಿದ್ದಾರೆ.